ಸಹಸ್ರಾರು ಭಕ್ತರಿಂದ ಮಾರಮ್ಮ ದೇವಿಯ ದರ್ಶನ

KannadaprabhaNewsNetwork |  
Published : Mar 22, 2024, 01:05 AM ISTUpdated : Mar 22, 2024, 01:06 AM IST
ದೇವಿ ಪೂಜೆ ಸಲ್ಲಿಸುತ್ತಿರುವ ಭಕ್ತರು | Kannada Prabha

ಸಾರಾಂಶ

ಮಾ. ೧೯ರಿಂದ ಆರಂಭವಾದ ಜಾತ್ರೆಯು ೨೭ರ ವರೆಗೆ ನಡೆಯಲಿದೆ. ಮಾ. ೨೧ರಂದು ಬೆಳಗ್ಗೆ ೫ ಗಂಟೆಗೆ ಸೇವೆಗಳು ಪ್ರಾರಂಭಗೊಂಡಿತು.

ಶಿರಸಿ: ನಗರದ ಬಿಡ್ಕಿಬೈಲ್‌ನಲ್ಲಿ ವಿರಾಜಮಾನಳಾದ ನಾಡಿನ ಅಧಿದೇವತೆ ಶಿರಸಿಯ ಮಾರಿಕಾಂಬಾ ದೇವಿಯ ದರ್ಶನ ಮತ್ತು ಪೂಜಾ ಸೇವೆಗಳು ಗುರುವಾರದಿಂದ ಆರಂಭವಾಗಿದ್ದು, ಸಹಸ್ರಾರು ಭಕ್ತಾದಿಗಳು ದೇವಿಯ ದರ್ಶನ ಪಡೆದು ಪುನೀತರಾದರು.

ಮಾ. ೧೯ರಿಂದ ಆರಂಭವಾದ ಜಾತ್ರೆಯು ೨೭ರ ವರೆಗೆ ನಡೆಯಲಿದೆ. ಮಾ. ೨೧ರಂದು ಬೆಳಗ್ಗೆ ೫ ಗಂಟೆಗೆ ಸೇವೆಗಳು ಪ್ರಾರಂಭಗೊಂಡಿತು. ದೇವಿಯ ಗದ್ದುಗೆಯ ಮೊದಲ ಪೂಜೆಯನ್ನು ನಾಡಿಗ ಮನೆತನದ ಅಜಿತ್ ನಾಡಿಗ್ ಪೂಜೆ ಸಲ್ಲಿಸಿ, ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ನಂತರ ಸಾರ್ವಜನಿಕರ ಸೇವೆಯು ಪ್ರಾರಂಭವಾಯಿತು.

ಬೆಳಗ್ಗೆ ೪ ಗಂಟೆಯಿಂದ ದೇವಿಯ ದರ್ಶನಕ್ಕಾಗಿ ಕಿಲೋ ಮೀಟರ್ ದೂರ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂತು. ದೇವಿ ಪ್ರತಿಷ್ಠಾಪನೆಯಾದ ಬಿಡ್ಕಿಬೈಲ್‌ನಿಂದ ೩ ಸಾಲಾಗಿ ಮಾರಿಕಾಂಬಾ ದೇವಾಲಯದ ವರೆಗೂ ಹೋಗಿದ್ದು, ಜನದಟ್ಟಣೆಯೆಂದು ತೋರ್ಪಡಿಸಿತು.

ವೃದ್ಧರು, ಗರ್ಭಿಣಿಯರಿಗೆ, ಅಂಗವಿಕಲರಿಗೆ ದೇವಿಯ ದರ್ಶನಕ್ಕೆ ನೇರ ವ್ಯವಸ್ಥೆ ಮಾಡಲಾಗಿತ್ತು. ಸೇವಾ ಕಾರ್ಯಕರ್ತರು ಅಶಕ್ತರಿಗೆ ವೀಲ್ ಚೇರ್ ಮೂಲಕ ದೇವಿ ದರ್ಶನ ಮಾಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಬೀದಿ ನಾಯಿಗಳು ಶೀಘ್ರ ಶೆಲ್ಟರ್‌ಗೆ : ರಾವ್‌
ಸಿದ್ದು ಅಹಿಂದ ಲೀಡರ್‌ ಆಗಿದ್ದರೆ ಪುತ್ರ ಕ್ಷೇತ್ರ ಆಯ್ಕೆ ಏಕೆ?: ಗೌಡ