ದರ್ಶನ್‌ ಮಾಡಿದ್ದಾರೆ ಎನ್ನಲಾದ ಕೊಲೆ, ಬಂಧನದ ಕ್ಷಣಕ್ಷಣದ ವಿವರ

KannadaprabhaNewsNetwork |  
Published : Jun 12, 2024, 12:30 AM IST
ದರ್ಶನ್‌ | Kannada Prabha

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಡೆದ ದುಷ್ಕೃತ್ಯಗಳನ್ನು ಕಾಲಾನುಕ್ರಮದಲ್ಲಿ ಪಟ್ಟಿ ಮಾಡಿದ್ದು ಈ ಕೆಳಕಂಡಂತಿದೆ.

ಶನಿವಾರ

ಬೆಳಗ್ಗೆ 11 ಗಂಟೆ- ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಅಪಹರಿಸಿದ ದರ್ಶನ್ ಸಹಚರರು

ಮಧ್ಯಾಹ್ನ 2- ಬೆಂಗಳೂರಿನ ಆರ್‌.ಆರ್‌.ನಗರದ ಪಟ್ಟಣಗೆರೆಗೆ ಕರೆದುತಂದ ಗ್ಯಾಂಗ್

ಮಧ್ಯಾಹ್ನ 3- ಪಟ್ಟಣಗೆರೆಯ ದರ್ಶನ್‌ ಸ್ನೇಹಿತನ ಶೆಡ್‌ಗೆ ರೇಣುಕಾಸ್ವಾಮಿ ಜತೆ ಪ್ರವೇಶ

ಮಧ್ಯರಾತ್ರಿ 12- ನಾಲ್ಕೈದು ತಾಸು ಮನಬಂದಂತೆ ಹಲ್ಲೆ ನಡೆಸಿ ರೇಣುಕಾಸ್ವಾಮಿ ಕೊಲೆ

ಭಾನುವಾರ

ಬೆಳಗಿನ ಜಾವ 3.40- ಸ್ಕಾರ್ಪಿಯೋ ಕಾರಿನಲ್ಲಿ ಚೀಲದಲ್ಲಿ ತುಂಬಿದ್ದ ರೇಣುಕಾಸ್ವಾಮಿ ಮೃತದೇಹ ಶೆಡ್‌ನಿಂದ ಸಾಗಣೆ

ಬೆಳಗಿನ ಜಾವ 4- ಸುಮನಹಳ್ಳಿ ಮೇಲ್ಸೇತುವೆ ಸಮೀಪದ ರಾಜಕಾಲುವೆಗೆ ಮೃತದೇಹ ಬಿಸಾಕಿ ಪರಾರಿ

ಬೆಳಗ್ಗೆ 8 ಗಂಟೆ- ಪೊಲೀಸರಿಗೆ ಅಪರಿಚಿತ ಮೃತದೇಹ ಪತ್ತೆ ಬಗ್ಗೆ ಸಾರ್ವಜನಿಕರಿಂದ ಮಾಹಿತಿ

ಸಂಜೆ 4- ಮೃತದೇಹ ಪತ್ತೆಯಾದ ಸ್ಥಳದ ಸಮೀಪದ ಅಪಾರ್ಟ್‌ಮೆಂಟ್‌ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ

ಸೋಮವಾರ

ರಾತ್ರಿ 8- ಪಿಎಸ್‌ಐಗೆ ಕರೆ ಮಾಡಿ ಶರಣಾಗತಿಯಾದ ದರ್ಶನ್‌ ಅವರ ನಾಲ್ವರು ಸಹಚರರು

ರಾತ್ರಿ 10- ಶರಣಾದ ಸಹಚರರ ವಿಚಾರಣೆ ಬಳಿಕ ಮತ್ತೆ ಏಳು ಮಂದಿಯ ಬಗ್ಗೆ ಮಾಹಿತಿ

ಮಧ್ಯರಾತ್ರಿ 12- ಕೊಲೆ ಕೃತ್ಯದಲ್ಲಿ ದರ್ಶನ್, ಗೆಳತಿ ಪವಿತ್ರಾ ಗೌಡ ಪಾತ್ರದ ಬಗ್ಗೆ ಹೇಳಿಕೆ

ಮಂಗಳವಾರ

ಬೆಳಗ್ಗೆ 8 ಗಂಟೆ- ಮೈಸೂರಿನಲ್ಲಿ ದರ್ಶನ್‌ರನ್ನು ವಶಕ್ಕೆ ಪಡೆದ ಕಾಮಾಕ್ಷಿಪಾಳ್ಯ ಪೊಲೀಸರು

ಬೆಳಗ್ಗೆ 10- ಬೆಂಗಳೂರಿನ ಆರ್‌.ಆರ್‌.ನಗರದ ಮನೆಯಲ್ಲಿ ಪವಿತ್ರಾಗೌಡ ಪೊಲೀಸ್‌ ವಶಕ್ಕೆ

ಬೆಳಗ್ಗೆ 11- ಮೈಸೂರಿನಿಂದ ಬೆಂಗಳೂರಿಗೆ ದರ್ಶನ್‌ರನ್ನು ಕರೆತಂದು ಪೊಲೀಸರ ವಿಚಾರಣೆ

ಸಂಜೆ 5- ಬೌರಿಂಗ್ ಆಸ್ಪತ್ರೆಯಲ್ಲಿ ದರ್ಶನ್ ಸೇರಿ ಎಲ್ಲ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ

ರಾತ್ರಿ 7- ಕೋರ್ಟ್‌ನಲ್ಲಿ ಎಲ್ಲ ಆರೋಪಿಗಳು ಹಾಜರು, 6 ದಿನ ಪೊಲೀಸ್ ವಶಕ್ಕೆ ನೀಡಿದ ಜಡ್ಜ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಶಾಲೆ ದುಬೈ ವಾರ್ಷಿಕೋತ್ಸವಕ್ಕೆ ಗೌರ್ನರ್‌ಗೆ ಆಹ್ವಾನ
ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ವಾರ್ನಿಂಗ್