ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಯಾದವಗಿರಿಯಲ್ಲಿರುವ ದಾಸಪ್ರಕಾಶ್ ಪ್ಯಾರಡೈಸ್ ಹೊಟೇಲ್ ಸಭಾಂಗಣದಲ್ಲಿ ಹೊಟೇಲ್ ಮಾಲೀಕರ ಪತ್ತಿನ ಸಹಕಾರ ಸಂಘವು ಗುರುವಾರ ಆಯೋಜಿಸಿದ್ದ ಸಹಕಾರ ವಿಜಯೋತ್ಸವ ಹಾಗೂ ಸಾಧಕ ಹೊಟೇಲ್ ಉದ್ಯಮಿಗಳಿಗೆ ಅಭಿನಂದನಾ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದಿಶಾ ಸಭೆ ನಡೆಸಿದಾಗ ಕಳೆದ ಒಂದು ವರ್ಷದೊಳಗ ಮುದ್ರಾ ಯೋಜನೆಯ ಮೂಲಕ 2.50 ಲಕ್ಷ ಜನರಿಗೆ 3 ಸಾವಿರ ಕೋಟಿ ನೀಡಲಾಗಿದೆ ಮಾಹಿತಿ ನೀಡಿದರು. ಅದರಲ್ಲಿ ಜಿಲ್ಲೆಯ 300 ಜನರಿಗೆ ಹೊಟೇಲ್ ಉದ್ಯಮ ಆರಂಭಿಸಲು ಸಾಲ ನೀಡಲಾಗಿದೆ ಎಂದರು.ಪ್ರಸ್ತುತ ಉನ್ನತ ಹುದ್ದೆ ಆಯ್ಕೆ ಹೆಚ್ಚಿದೆ. ಅದರ ನಡುವೆಯೂ ಅನೇಕ ಯುವಕರು ಹೊಟೇಲ್ ಉದ್ಯಮದ ಕಡೆ ಬರುತ್ತಿರುವುದು ಉದ್ಯಮ ಬೆಳೆಯುತ್ತಿರುವುದರ ಸೂಚಕ. ಮೈಸೂರಿನಲ್ಲಿ ಮಹಿಳೆಯರೂ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ ಎಂದ ಅವರು ಶ್ಲಾಘಿಸಿದರು.
ರಾಮಕೃಷ್ಣ ವಿದ್ಯಾಶಾಲೆಯ ಸ್ವಾಮಿ ಯುಕ್ತೇಶಾನಂದ, ಗೋಪಾಲಗೌಡ ಸ್ಮಾರಕ ನ್ಯೂರೋ ಕೇರ್ಸೆಂಟರ್ಡಾ. ಸುಶೃತ್ ಗೌಡ, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ, ಸಂಘದ ಅಧ್ಯಕ್ಷ ನಾರಾಯಣ ಹೆಗಡೆ, ಮಾಜಿ ಅಧ್ಯಕ್ಷರಾದ ಎಂ. ಕೃಷ್ಣದಾಸ ಪುರಾಣಿಕ್, ಸುಧಾಕರ್ ಎಸ್. ಶೆಟ್ಟಿ, ಸುಬ್ರಮಣ್ಯ ಆರ್. ತಂತ್ರಿ, ಎಂ. ಆನಂದ ಶೆಟ್ಟಿ ಮೊದಲಾದವರು ಇದ್ದರು.