ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರೋಗಿಗಳ ಪರದಾಟ
ಡಿಇಒಗಳನ್ನು ಆಸ್ಪತ್ರೆ ಹಂತದಲ್ಲಿ ಹೊರಗುತ್ತಿದೆ ಆಧಾರದ ಮೇರೆಗೆ ನೇಮಕ ಮಾಡಿಕೊಳ್ಳಲಾಗಿತ್ತು. ಮತ್ತೊಂದು ಕಡೆ ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ಗಳಿಲ್ಲದೆ ನಿತ್ಯ ೧ ಸಾವಿರ ಒಳ ರೋಗಿಗಳು ಬರುವ ಚೀಟಿ ಬರೆಸಿಕೊಳ್ಳಲು ಹಾಗೂ ಆಸ್ಪತ್ರೆಗೆ ದಾಖಲಾಗಲು ಡೇಟಾ ಆಪರೇಟರ್ಗಳಿಲ್ಲದೆ ರೋಗಿಗಳು ಪರದಾಡಿದರು.ಆರೋಗ್ಯ ಇಲಾಖೆಯಿಂದ ಇ-ಹಾಸ್ಪಿಟಲ್ ಕಾರ್ಯಕ್ರಮದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇರೆಗೆ ಡೇಟಾ ಎಂಟ್ರಿ ಆಪರೇಟರ್ಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು, ಇವರು ಕೌಂಟರ್ಗಳಲ್ಲಿ ಒಪಿಡಿ ಚೀಟಿ ನೀಡುವುದು, ಔಷಧ ಮಳಿಗೆ, ದಾಖಲೆ ಕೊಠಡಿ ಹೀಗೆ ವಿವಿಧ ರೀತಿಯ ಕಾರ್ಯನಿರ್ವಹಿಸುತ್ತಿದ್ದರು. ಚೀಟಿ ನೀಡುವವರಿಲ್ಲಡೇಟಾ ಎಂಟ್ರಿ ಆಪರೇಟರ್ಗಳನ್ನು ಕೆಸಲದಿಂದ ವಜಾ ಮಾಡಿರುವ ಕಾರಣ, ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಗ್ಗೆಯಿಂದಲೇ ನೂರಾರು ಒಳರೋಗಿಗಳು ಚೀಟಿ ಪಡೆಯಲು ಕೌಂಟರ್ ಬಳಿ ನಿಂತರೂ ಯಾವ ಸಿಬ್ಬಂದಿಯೂ ಇಲ್ಲದೆ ಪರದಾಡಿದರು, ಜನರು ಹೆಚ್ಚಾಗಿ ನೂಕುನುಗ್ಗಾಟ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿಯನ್ನೇ ಬರವಣಿಗೆಯಲ್ಲಿ ಚೀಟಿ ನೀಡಲು ಆಯೋಜಿಸಲಾಯಿತು.
ರೋಗಿಗಳಿಗೆ ಉಂಟಾಗುತ್ತಿರುವ ತೊಂದರೆ ನಿವಾರಿಸಲು ಸರ್ಕಾರ ಡೇಟಾ ಸಿಬ್ಬಂದಿಯನ್ನು ಸಿಬ್ಬಂದಿಯನ್ನು ಮತ್ತೆ ನೇಮಿಸಿ ಆಸ್ಪತ್ರೆಯಲ್ಲಿ ಉಂಟಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.