ಮಾದರಿ ಜಿಲ್ಲೆಯಾಗಿ ದಾವಣಗೆರೆ ಕಟ್ಟುವೆ: ಮಲ್ಲಿಕಾರ್ಜುನ

KannadaprabhaNewsNetwork |  
Published : Sep 23, 2025, 01:03 AM IST
(ಎಸ್‌.ಎಸ್‌.ಎಂ., ಸಚಿವ) | Kannada Prabha

ಸಾರಾಂಶ

ದಾವಣಗೆರೆಯನ್ನು ರಾಜ್ಯದಲ್ಲೇ ಮಾದರಿ ಜಿಲ್ಲೆಯಾಗಿ ಮಾಡುವುದು ನನ್ನ ಬಹು ವರ್ಷಗಳ ಕನಸಾಗಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರದಲ್ಲಿ ನಿರಂತರ ಶ್ರಮಿಸುವೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.

- ಅಧಿಕಾರ ಇವತ್ತು ಇರುತ್ತೆ, ನಾಳೆ ಹೋಗುತ್ತೆ, ಜನರ ಪ್ರೀತಿ, ವಿಶ್ವಾಸ ಶಾಶ್ವತ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯನ್ನು ರಾಜ್ಯದಲ್ಲೇ ಮಾದರಿ ಜಿಲ್ಲೆಯಾಗಿ ಮಾಡುವುದು ನನ್ನ ಬಹು ವರ್ಷಗಳ ಕನಸಾಗಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರದಲ್ಲಿ ನಿರಂತರ ಶ್ರಮಿಸುವೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದ ಬಾಪೂಜಿ ಸಮುದಾಯ ಭವನದಲ್ಲಿ ಸೋಮವಾರ ಎಸ್ಸೆಸ್ಸೆಂ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ತಮ್ಮ 58ನೇ ವರ್ಷದ ಜನ್ಮದಿನಾಚರಣೆಯಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು. ಈಗ್ಗೆ 20 ವರ್ಷಗಳ ಜಿಲ್ಲಾ ಕೇಂದ್ರದ ರಸ್ತೆ ಹೇಗಿದ್ದವು, ಈಗ ಹೇಗಿವೆ ಎಂಬುದನ್ನು ನಮ್ಮ ಕೆಲಸಗಳೇ ಹೇಳುತ್ತವೆ ಎಂದರು.

ಜಿಲ್ಲಾ ಕೇಂದ್ರದ ಉತ್ತರ, ದಕ್ಷಿಣ ಭಾಗದಲ್ಲಿ ರಸ್ತೆ, ಚರಂಡಿ, ಒಳಚರಂಡಿ ಸೇರಿದಂತೆ ಮೂಲ ಸೌಕರ್ಯಗಳು ಉತ್ತಮವಾಗಿವೆ. ಕುಂದುವಾಡ ಕೆರೆ, ಟಿವಿ ಸ್ಟೇಷನ್ ಕೆರೆ, ತುಂಗಭದ್ರಾ ನದಿ ನೀರಿನ ಜೊತೆಗೆ ಜಲಸಿರಿ ಯೋಜನೆಯೂ ಸಮರ್ಪಕ ಅನುಷ್ಠಾನಗೊಳ್ಳುತ್ತಿದೆ. ದೇಶ, ರಾಜ್ಯದಲ್ಲೇ ವಾಸಯೋಗ್ಯ ಮಹಾ ನಗರವೆಂಬ ಶ್ರೇಯ ದಾವಣಗೆರೆಗೆ ಲಭಿಸಿದ್ದೇ ಅಭಿವೃದ್ಧಿ ಕಾರ್ಯಕ್ಕೆ ಸಾಕ್ಷಿ ಎಂದು ತಿಳಿಸಿದರು.

ಸರಳವಾಗಿ ಜನ್ಮದಿನ ಆಚರಿಸಲು ಹೇಳಿದ್ದರೂ ಅಭಿಮಾನಿಗಳು ಇಷ್ಟೊಂದು ದೊಡ್ಡಮಟ್ಟದಲ್ಲಿ, ವ್ಯವಸ್ಥಿತವಾಗಿ ನನ್ನ 58ನೇ ಜನ್ಮದಿನ ಹಮ್ಮಿಕೊಂಡಿದ್ದಾರೆ. ಇದು ತುಂಬಾ ಖುಷಿ ನೀಡುತ್ತದೆ. ಜನ್ಮದಿನದ ನೆಪದಲ್ಲಿ ಅನೇಕ ಸಾಮಾಜಿಕ ಸೇವಾ ಕಾರ್ಯಗಳು ಆಗಿರುವುದು, ಗೋ ಶಾಲೆಗಳಿಗೆ ಮೇವು, ಬಡವರಿಗೆ, ವಿಶೇಷ ಚೇತನರಿಗೆ ನೆರವಿನಹಸ್ತ ಚಾಚುವ ಮೂಲಕ ನನ್ನ ಜನ್ಮದಿನ ಮತ್ತಷ್ಟು ಅರ್ಥಪೂರ್ಣಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.

ಎಲ್ಲ ಜಾತಿ, ಧರ್ಮೀಯರೂ ನಮ್ಮೊಂದಿಗಿದ್ದಾರೆ. ಪಕ್ಷ ಸಂಘಟನೆಯಲ್ಲೂ ನಮ್ಮೊಟ್ಟಿಗೆ ಜನರಿದ್ದಾರೆ. ರಾಜಕೀಯ, ಅಧಿಕಾರ ಇವೆಲ್ಲವೂ ಇವತ್ತು ಇರುತ್ತೆ, ನಾಳೆ ಹೋಗುತ್ತೆ. ಆದರೆ, ಜನರ ಪ್ರೀತಿ, ವಿಶ್ವಾಸ ಶಾಶ್ವತವಾದುದು. ನಮಗೆ ಅಂತಹ ಪ್ರೀತಿ, ವಿಶ್ವಾಸವೇ ಮುಖ್ಯ. ದಾವಣಗೆರೆ ನಗರ, ಜಿಲ್ಲೆಯನ್ನು ಮಾದರಿಯಾಗಿಸಲು ನಾವು, ನೀವೆಲ್ಲರೂ ಶ್ರಮಿಸೋಣ ಎಂದರು.

ಕೊರೋನಾ ಹಾವಳಿ ಸಂದರ್ಭ ನನ್ನ ಕೈಯಲ್ಲಿ ಅಧಿಕಾರ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಆಗ ಅಧಿಕಾರದಲ್ಲಿದ್ದ ಪಕ್ಷದವರು ತಮಗೆ ಬೇಕಾದವರಿಗೆ ಮಾತ್ರವೇ ಚಿಕಿತ್ಸೆ, ಲಸಿಕೆ ನೀಡಿದರು. ಆದರೆ, ನಾನು ಯಾವುದೇ ಜಾತಿ, ಧರ್ಮ ಎಂದು ನೋಡದೇ ಎಲ್ಲ ಜನರಿಗೂ ಮಾನವೀಯ ದೃಷ್ಟಿಯಿಂದ ಉಚಿತವಾಗಿ ಲಸಿಕೆ ಕೊಡಿಸಿದ್ದೇನೆ. ಆಸ್ಪತ್ರೆಯಲ್ಲಿ ದಾಖಲಾಗಲು ಬೆಡ್ ಇಲ್ಲದಾಗ ನಮ್ಮ ಆಸ್ಪತ್ರೆಗಳಲ್ಲಿ ನೂರಾರು ಜನರಿಗೆ ದಾಖಲು ಮಾಡಿಸಿದ್ದಿದೆ. ಸಾವಿನ ಅಂಚಿನಲ್ಲಿದ್ದವರೂ ಪುನರ್ಜನ್ಮ ಪಡೆದಿದ್ದಾರೆ. ವಿಪಕ್ಷದ ಕೆಲವರ ಟೀಕೆಗಳಿಗೆ ಉತ್ತರ ಕೊಡಬೇಕಾಗಿಲ್ಲ ಎಂದು ಎಸ್‌.ಎಸ್‌. ಮಲ್ಲಿಕಾರ್ಜುನ ತಿಳಿಸಿದರು.

- - -

(ಬಾಕ್ಸ್‌)

* ಪತಿ ಎಸ್ಸೆಸ್ಸೆಂ ನನಗೆ ಸ್ಫೂರ್ತಿ: ಡಾ.ಪ್ರಭಾ ಇದು ಕುಟುಂಬದ ಕಾರ್ಯಕ್ರಮ. ಕಾಂಗ್ರೆಸ್ ಪಕ್ಷ ಒಂದು ಕುಟುಂಬವಿದ್ದಂತೆ. ಶಾಮನೂರು ಮನೆ ಸೊಸೆಯಾಗಿ 21 ವರ್ಷವಾಗಿದೆ. ಎಲ್ಲ ಸಂದರ್ಭದಲ್ಲೂ ನನಗೆ ಪತಿ ಎಸ್‌.ಎಸ್‌. ಮಲ್ಲಿಕಾರ್ಜುನ ನನಗೆ ಸ್ಫೂರ್ತಿಯಾಗಿದ್ದಾರೆ. ಪ್ರತಿ ಸಲ ಶಾಸಕರಾಗಿ ದಾವಣಗೆರೆಗೆ ವಿಶೇಷ ಕೊಡುಗೆ ನೀಡಿದ್ದಾರೆ. ಮುಂದಿನ 50 ವರ್ಷ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ. ಇಡೀ ದೇಶ, ವಿಶ್ವವೇ ದಾವಣಗೆರೆಯತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಧೂಳು ಮುಕ್ತ ನಗರ, ಸಿಮೆಂಟ್ ರಸ್ತೆ, ಸಮರ್ಪಕ‌ ನೀರು ಹೀಗೆ ನಾನಾ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದಾರೆ. ಮುಂದೆಯೂ ಅಭಿವೃದ್ಧಿ ಕಾರ್ಯ ಭರದಿಂದ ಸಾಗಲಿವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

- - -

-(ಫೋಟೋ ಬರಲಿವೆ)

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ