ಕೆರೂರು ಗ್ರಾಮಸ್ಥರಿಂದ ರಸ್ತೆ ಅತಿಕ್ರಮಣ ತೆರವಿಗೆ ಗಡುವ ನಿಗದಿ

KannadaprabhaNewsNetwork |  
Published : Jan 14, 2026, 02:30 AM IST
ಫೋಟೋ- ಆಳಂದ ಆಳಂದ | Kannada Prabha

ಸಾರಾಂಶ

Deadline set for Kerur villagers to clear road encroachment

-ಹಿರಿಯ ಸಾಹಿತಿ ಎಸ್.ಪಿ. ಸುಳ್ಳದ ನೇತೃತ್ವದಲ್ಲಿ ಇಒ ಮಾನಪ್ಪ ಕಟ್ಟಿಮನಿ ಅವರಿಗೆ ಮನವಿ

-----

ಕನ್ನಡಪ್ರಭ ವಾರ್ತೆ ಆಳಂದ

ತಾಲೂಕಿನ ಕೆರೂರು ಗ್ರಾಮದ ಜ್ವಲಂತ ಮೂರು ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಶಾಸಕರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿ, ನಂತರ ತಾಲೂಕು ಪಂಚಾಯಿತಿ ಕಚೇರಿ ಎದುರು ಕೆಲ ಹೊತ್ತು ಧರಣಿ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಗಡುವು ನೀಡಿದರು.

ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ, ಸಾಹಿತಿ ಎಸ್.ಪಿ ಸುಳ್ಳದ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಮುಖ್ಯವಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾರಿಗಳಿಗೆ ಒತ್ತಾಯಿಸಿದರು.

ದರ್ಗಾಶಿರೂರು ಮತ್ತು ಕೆರೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಡಾಂಬರ ರಸ್ತೆ ಇಲ್ಲದಕ್ಕೆ ಹಲವು ವರ್ಷಗಳಿಂದ ಜನ ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಗ್ರಾಮ ಸಂಪರ್ಕಕ್ಕೆ ಡಾಂಬರೀಕರಣ ಮಾಡಬೇಕು.

ಗ್ರಾಮದಲ್ಲಿನ ಸಾರ್ವಜನಿಕ ರಸ್ತೆಯನ್ನು ಗ್ರಾಮದ ದಾನಪ್ಪ ಮೂಲಗೆ ಮತ್ತು ರೇವಣಸಿದ್ದ ಸಕ್ಕರಗಿ ಅವರು ರಸ್ತೆಯನ್ನು ಅತಿಕ್ರಮ ಮಾಡಿರುವುದರಿಂದ ಜನರ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಗ್ರಾಪಂ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎರಡೂ ದಿನದಲ್ಲಿ ಅತಿಕ್ರಮಣ ತೆರವು ಮಾಡದೆ ಹೋದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಶಾಸಕರ ಅನುದಾನದಲ್ಲಿ ನಿರ್ಮಿತವಾದ ಬುದ್ಧ ವಿಹಾರದಲ್ಲಿ ಗೌತಮ ಬುದ್ಧರ ಪ್ರತಿಮೆ ಸ್ಥಾಪನೆಗೆ ಶಾಸಕರು ಅನುದಾನ ನೀಡಬೇಕು ಎಂದು ಶಾಸಕರ ನೀಡಿದ ಪಾತ್ರದಲ್ಲಿ ಒತ್ತಾಯಿಸಿದ್ದಾರೆ.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರಿಗೆ ರಸ್ತೆ ಅತಿಕ್ರಮಣ ತಕ್ಷಣ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗಡುವು ನೀಡಿ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಸಾಹಿತಿ ಎಸ್.ಪಿ. ಸುಳ್ಳದವರ ನೇತೃತ್ವದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ನ್ಯಾ. ಬಸಣ್ಣ ಸಿಂಗೆ, ಸಿದ್ದಾರೂಢ ಜಿ. ಕೋನಕಾಟೆ, ಸುನೀಲ ಕೋನಕಾಟೆ, ಬಾಬುರಾವ್ ಎಸ್. ಸುಳ್ಳದ್, ಸುರೇಶ್ ಬಿ. ಕೋನಕಾಟೆ, ಭೀಮಶಂಕರ ಎ. ಚೆನ್ನಗುಂಡ, ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್ ಬಿ. ಚನಗುಂಡ, ಶಿವಲಿಂಗ ಚನಗುಂಡ, ಶರಣಪ್ಪ ಜಿ. ಸುಳ್ಳದ್, ಸುಭಾಷ ಚನ್ನಗುಂಡ, ಮಲ್ಲಿಕಾರ್ಜುನ ಶಿಂಗೆ, ಸಿದ್ದಾರ್ಥ ಸುಳ್ಳದ್, ನಾಗರಾಜ ಸಿಂಗೆ, ಶ್ರವಣ ಚನಗುಂಡ, ಸಂಜಯ್‍ಕುಮಾರ್ ಬಿ. ಸುಳ್ಳದ್, ಸಂಜುಕುಮಾರ್ ಎಸ್. ಸುಳ್ಳದ ಭಾಗವಹಿಸಿದ್ದರು.

ಫೋಟೋ- ಆಳಂದ ಆಳಂದ

ಚಿತ್ರ ಶೀರ್ಷಿಕೆ 13ಎಎಲ್‍ಡಿ1

ಆಳಂದ ಪಟ್ಟಣದ ತಾಪಂ ಕಚೇರಿಯ ಮುಂದೆ ಕೇರೂರ ಗ್ರಾಮಸ್ಥರು ಹಿರಿಯ ಸಾಹಿತಿ ಎಸ್.ಪಿ. ಸುಳ್ಳದ ನೇತೃತ್ವದಲ್ಲಿ ಇಒ ಮಾನಪ್ಪ ಕಟ್ಟಿಮನಿ ಅವರಿಗೆ ಬೇಡಿಕೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸುಗ್ಗಿ ಸಂಕ್ರಾಂತಿ
ಮಸ್ಕಿ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಶಾಸಕರಿಂದ ಜನರ ಸಮಸ್ಯೆ ಆಲಿಕೆ