ಬ್ರಾಹ್ಮಣ ವಿದ್ಯಾರ್ಥಿಗಳ ಆರ್ಥಿಕ ನೆರವಿಗೆ ನಿರ್ಧಾರ

KannadaprabhaNewsNetwork |  
Published : Jul 24, 2025, 12:45 AM IST
ಉದ್ಯಮಿ ಪ್ರಕಾಸ ಪಂಡಿತ ಅವರು ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್‌ಗೆ ದೇಣಿಗೆ ಚೆಕ್‌ ನೀಡಿದರು | Kannada Prabha

ಸಾರಾಂಶ

ಸಂಘದ ಸದಸ್ಯತ್ವ ಅಭಿಯಾನ‌ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುವ ಮಹತ್ವದ ನಿರ್ಧಾರವನ್ನು ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್‌ ಕೈಗೊಂಡಿದೆ. ಉದ್ಯಮಬಾಗದಲ್ಲಿರುವ ಸೆಲೆಬ್ರೆಷನ್ ಸಭಾಗೃಹದಲ್ಲಿ ನಡೆದ ಟ್ರಸ್ಟ್‌ನ ಕಾರ್ಯಕಾರಿ‌ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಂಘದ ಸದಸ್ಯತ್ವ ಅಭಿಯಾನ‌ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುವ ಮಹತ್ವದ ನಿರ್ಧಾರವನ್ನು ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್‌ ಕೈಗೊಂಡಿದೆ. ಉದ್ಯಮಬಾಗದಲ್ಲಿರುವ ಸೆಲೆಬ್ರೆಷನ್ ಸಭಾಗೃಹದಲ್ಲಿ ನಡೆದ ಟ್ರಸ್ಟ್‌ನ ಕಾರ್ಯಕಾರಿ‌ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ರಾಮ ಭಂಡಾರಿ ಅವರು ಸಂಘಟನೆ ದೃಷ್ಟಿಯಿಂದ ಸದಸ್ಯತ್ವ ಹೆಚ್ಚಿಸುವ ಅಭಿಯಾನ ಮಾಡಬೇಕಾಗಿದೆ. ಜೊತೆಗೆ ಬೆಳಗಾವಿಯ ಪ್ರತಿಯೊಂದು ಪ್ರದೇಶಕ್ಕೆ ಹೋಗಿ ಸಭೆ ಮಾಡುವ ತೀರ್ಮಾನ ಮಾಡಲಾಯಿತು. ಅಷ್ಟೆ ಅಲ್ಲ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ವಸ್ತು ಪ್ರದರ್ಶನ ಏರ್ಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಟ್ರಸ್ಟ್‌ ಉಪಾಧ್ಯಕ್ಷ ಭರತ ದೇಶಪಾಂಡೆ ಅವರು ಸಂಘಟನೆ ಹಿನ್ನೆಲೆಯಲ್ಲಿ ಕೆಲವೊಂದು ಸಲಹೆ ಸೂಚನೆ ನೀಡಿದರು.ಟ್ರಸ್ಟ್‌ ಕಾರ್ಯದರ್ಶಿ ವಿಲಾಸ ಬದಾಮಿ, ಜಂಟಿ ಕಾರ್ಯದರ್ಶಿ ವಿಲಾಸ ಜೋಶಿ, ಕೋಶಾಧ್ಯಕ್ಷ ರಮೇಶ ಕುಲಕರ್ಣಿ, ಆನಂದ ಕುಲಕರ್ಣಿ, ಅನುಶ್ರೀ ದೇಶಪಾಂಡೆ, ರಾಜೇಶ್ ತಳೆಗಾಂವ, ಅಜಿತ್ ಲೋಕೂರು, ನಾರಾಯಣ ಬಾಗಲಕೋಟ, ಉಪೇಂದ್ರ ಬಾಜಿಕರ, ಅರವಿಂದ ತೇಲಂಗ್, ಪ್ರಹ್ಲಾದ್ ಜೋಶಿ ಮುಂತಾದವರು ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಉದ್ಯಮಿ ಪ್ರಕಾಶ್ ಪಂಡಿತ್ ಅವರು ಟ್ರಸ್ಟಗೆ ದೇಣಿಗೆ ಚೆಕ್ ನೀಡಿದರು. ಅದನ್ನು ಟ್ರಸ್ಟ ಪದಾಧಿಕಾರಿಗಳು ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌