ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜೆಡಿಎಸ್ ಮುಖಂಡ ಶಿವಕುಮಾರ ನಾಟಿಕಾರ ಅವರು ಹಮ್ಮಿಕೊಂಡಿರುವ ಭೀಮಾ ನದಿಗೆ ನೀರು ಹರಿಸಿ ರೈತರ ಜೀವ ಉಳಿಸಿ ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.
ನಾವೆಲ್ಲರೂ ಭೀಮಾ ನದಿ ದಂಡೆಯ ತಾಲೂಕುಗಳ ಜನರಾಗಿದ್ದೇವೆ. ಜನ ನಮಗೆ ಮತ ನೀಡಿ ಗೆಲ್ಲಿಸಿದ್ದು ಅವರ ಕಷ್ಟಕ್ಕೆ ಸ್ಪಂದಿಸಲಿ ಎಂದು ಹೀಗಾಗಿ ಭೀಮಾ ನದಿ ದಂಡೆಯ ಜನರ ಹಿತರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹೀಗಾಗಿ ಭೀಮಾ ನದಿಗೆ ನೀರು ಹರಿಸಿ ಈ ಭಾಗದ ಜನ, ಜಾನುವಾರುಗಳ ಜೀವ ರಕ್ಷಣೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದ ಅವರು, ಯಾವುದೇ ಸರ್ಕಾರವಾಗಿರಲಿ ಭೀಮಾ ನದಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವ ಅಪರಾಧಿ ಭಾವನೆ ಸರ್ಕಾರಗಳಿಗೆ ಇದೆ. ಆದರೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಭೀಮೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭೀಮಾ ನದಿ ದಂಡೆಯಲ್ಲಿರುವ ಎಲ್ಲಾ ತಾಲೂಕುಗಳ ಶಾಸಕರು, ಜನಪ್ರತಿನಿಧಿಗಳು, ಹೋರಾಟಗಾರರು, ವಕೀಲರು, ಸಾರ್ವಜನಿಕರ ಸಮೀತಿ ರಚನೆ ಮಾಡಿ ನ್ಯಾಯಾಂಗ ಹೋರಾಟ ಮುಂದುವರೆಸೋಣ ಎಂದರು.ಶಾಸಕ ಎಂ.ವೈ. ಪಾಟೀಲ್ ಮಾತನಾಡಿ, ಭೀಮಾ ನದಿಗೆ ನಮ್ಮ ಹಕ್ಕಿನ ನೀರು ಪಡೆಯಲು ಎಲ್ಲರೂ ಕೂಡಿ ಹೋರಾಟ ಮಾಡೋಣ. ಸಧ್ಯಕ್ಕೆ ಎದುರಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಏನೇನು ಮಾರ್ಗಗಳಿವೆ ಅವುಗಳನ್ನು ನಾವು ಎಡಬಿಡದೆ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್, ಮಕ್ಬೂಲ್ ಪಟೇಲ್, ಮಲ್ಲಿಕಾರ್ಜುನ ಸಿಂಗೆ, ಚಿದಾನಂದ ಮಠ, ಬಸಣ್ಣ ಗುಣಾರಿ, ಜಮೀಲ ಗೌಂಡಿ, ಮಾಂತು ಬಳೂಂಡಗಿ ಸೇರಿದಂತೆ ಅನೇಕರು ಇದ್ದರು.