ಕನ್ನಡಪ್ರಭ ವಾರ್ತೆ ಚಿತ್ತಾಪುರ
ಪಟ್ಟಣದ ಅಂಬಿಗರ ಚೌಡಯ್ಯ ಭವನದಲ್ಲಿ ಸಮಾವೇಶ ಕುರಿತಾಗಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಿ ಸಮಾಜ ಎಸ್ಟಿ ಸೇರ್ಪಡೆಗಾಗಿ ಆಯೋಜನೆ ಮಾಡಿರುವ ಸಮಾಜವೇಶವನ್ನು ಇಡೀ ಸಮಾಜದ ಜನರ, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಂಡು ಸಮಾಜ ನನ್ನ ಹಿಂದೆ ಇದೆ ಎಂದು ಬಿಂಬಿಸಿಕೊಂಡು ಸಮಾಜದ ದಾರಿಯನ್ನು ತಪ್ಪಿಸುವ ಕೆಲಸವನ್ನು ಕಮಕನೂರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಖಂಡರಾದ ಹಣಮಂತ ಸಂಕನೂರ, ಬಸವರಾಜ ಚಿಣಮಳ್ಳೊ, ಸುರೇಶ ಬೆನಕನಹಳ್ಳಿ, ಭೀಮಣ್ಣ ಹೊತಿನಮಡಿ, ನಿಂಗಣ್ಣ ಹೆಗಲೇರಿ, ಬಸಣ್ಣ ತಳವಾರ, ಗುರುನಾಥ ಗುದಗಲ್, ಮುನಿಯಪ್ಪ ಕೊಳ್ಳಿ, ನಾಗೇಂದ್ರ ಜೈಗಂಗಾ, ದಶರಥ ದೊಡ್ಮನಿ, ವೆಂಕಟರಮಣ ಬೇವಿನಗಿಡ, ಶಿವಕುಮಾರ ಯಾಗಾಪುರ, ಕರಣಕುಮಾರ ಅಲ್ಲೂರ, ತಮ್ಮಣ್ಣ ಡಿಗ್ಗಿ, ಮಲ್ಲಿಕಾರ್ಜುನ ಸಂಗಾವಿ, ಲಕ್ಷ್ಮಿಕಾಂತ ಸಾಲಿ ಇತರರು ಇದ್ದರು.