ಯಲಬುರ್ಗಾ: ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಫೆ. ೧೫ರಂದು ಸೇವಾಲಾಲ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಬಸವರಾಜ ತೆನ್ನೆಳ್ಳಿ ಹೇಳಿದರು.
ಆಲ್ ಇಂಡಿಯಾ ಬಂಜಾರ ಸೇವಾ ಸಂಘ ತಾಲೂಕಾಧ್ಯಕ್ಷ ಸೀನಪ್ಪ ನಾಯಕ ಹಾಗೂ ಗೋರಸೇನಾ ತಾಲೂಕಾಧ್ಯಕ್ಷ ಶಿವಮೂರ್ತಿ ರಾಠೋಡ ಮಾತನಾಡಿ, ಬಂಜಾರ ಸಮುದಾಯದ ಮುಖಂಡರ ಕೋರಿಕೆಯಂತೆ ಫೆ.೧೫ರ ಬದಲು ಸ್ಥಳೀಯ ಶಾಸಕರಾದ ಬಸವರಾಜ ರಾಯರಡ್ಡಿ ಜತೆ ಚರ್ಚಿಸಿ ಅವರು ಸೂಚಿಸುವ ದಿನಾಂಕದಂದು ನಮ್ಮ ಸಮಾಜ ಬಾಂಧವರ ಜತೆಗೂಡಿ ತಾಲೂಕು ಮಟ್ಟದ ಸೇವಾಲಾಲರ ಜಯಂತಿಯನ್ನು ಅದ್ಧೂರಿಯಿಂದ ಪಟ್ಟಣದಲ್ಲಿ ನಡೆಸಲಾಗುವುದು ಎಂದು ಹೇಳಿದರು.
ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ, ಗ್ರೇಡ್-೨ ತಹಸೀಲ್ದಾರ್ ನಾಗಪ್ಪ ಸಜ್ಜನ್, ಸಿಡಿಪಿಒ ಬಿ.ಎಂ. ಮಾಳೆಕೊಪ್ಪ, ಬಂಜಾರ ಸಮುದಾಯದ ಮುಖಂಡರಾದ ಅಚ್ಚಪ್ಪ ನಾಯಕ, ಲೋಕಪ್ಪ ನಾಯಕ, ಪರಸಪ್ಪ ನಾಯಕ, ದೇವಪ್ಪ ಪೂಜಾರ್, ಚನ್ನಪ್ಪ ಜಾಧವ, ಶೇಖರಪ್ಪ ಕೋಳಿಹಾಳ, ಇಂದ್ರಪ್ಪ ಕಾರಬಾರ, ಶಾಂತಪ್ಪ ಪ್ರಜಾರ, ರಾಮಪ್ಪ ರಾಠೋಡ, ರಮೇಶ ನಾಯಕ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.