ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೊಪ್ಪ ಹೋಬಳಿ ಆಬಲವಾಡಿ ಗ್ರಾಮದ ಮಂಡ್ಯ-ನಾಗಮಂಗಲ ರಸ್ತೆಯ ಪ್ರಮುಖ ವೃತ್ತಕ್ಕೆ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ವೃತ್ತದ ನಾಮಫಲಕ ಅನಾವರಣ ಮಾಡಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣ ಅವರು ತಮ್ಮ ಅಧಿಕಾರಾವಧಿಯಲ್ಲಿ ಕೊಪ್ಪ ಹೋಬಳಿಯಲ್ಲಿ ತಮ್ಮ ತಂದೆ ಎಸ್.ಸಿ. ಮಲ್ಲಯ್ಯ ಹೆಸರಿನಲ್ಲಿ ಈಗಿನ ಹೆಸರು ಎನ್ಎಸ್ಎಲ್, ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಹೋಬಳಿ ರೈತರು ಆರ್ಥಿಕವಾಗಿ ಸದೃಢಗೊಳ್ಳಲು ಕಾರಣವಾಗಿದ್ದಾರೆ ಎಂದರು.ಅದೇ ರೀತಿ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಅವರು ತಮ್ಮ ಶಾಸಕತ್ವದ ಮೊದಲ ಅವಧಿಯಲ್ಲಿ ಆಬಲವಾಡಿ ಗ್ರಾಮದ ಶ್ರೀ ತೋಪಿನ ತಿಮ್ಮಪ್ಪ ದೇವಾಲಯವನ್ನು ಅಭಿವೃದ್ಧಿಪಡಿಸುವುಂರೊಂದಿಗೆ ಇಡೀ ರಾಜ್ಯದ ಗಮನ ಸೆಳೆದು ಭಕ್ತಾದಿಗಳ ಆಕರ್ಷಣೀಯ ಕೇಂದ್ರವಾಗಿ ರೂಪಿಸಿದ್ದಾರೆ ಎಂದರು.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಹಾಗೂ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೆಸರುಗಳು ಕೊಪ್ಪ ಹೋಬಳಿಯಲ್ಲಿ ಶಾಶ್ವತವಾಗಿ ಉಳಿಯಬೇಕೆಂಬ ಉದ್ದೇಶದಿಂದ ಪುತ್ಥಳಿ ಸ್ಥಾಪನೆ ಮಾಡಲು ಎಂಟು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಖಂಡರ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ಚಂದ್ರಮ್ಮ, ದೇವಾಲಯದ ಟ್ರಸ್ಟಿಗಳಾದ ಜಯಣ್ಣ, ರಾಜಣ್ಣ, ಡೇರಿ ನಿರ್ದೇಶಕ ಸುರೇಶ, ಗ್ರಾಮದ ಮುಖಂಡರಾದ ವೀರಣ್ಣ, ಗೋವಿಂದ, ದಾವಲ್ ರಮೇಶ, ಜಯರಾಮು, ದೇವರಾಜು, ಗಿಡ್ಡನ ತಿಮ್ಮಯ್ಯ, ಭೀಮೇಶ್, ತಮ್ಮಣ್ಣ, ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.