ಹೆಚ್ಚಿನ ಅವಧಿಯನ್ನು ಕಲಿಕೆಗೆ ಮೀಸಲಿಡಿ: ಪ್ರಭುಲಿಂಗ ದೇವರು

KannadaprabhaNewsNetwork |  
Published : Jan 18, 2026, 02:30 AM IST
ಕಾರ್ಯಕ್ರಮದಲ್ಲಿ ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಮಾತನಾಡಿದರು. | Kannada Prabha

ಸಾರಾಂಶ

ಮುಳಗುಂದ ಪಟ್ಟಣದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿ ಗವಿಮಠದಲ್ಲಿ ಆರ್.ಎಂ.ಎಸ್.ಎ. ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಮುಳಗುಂದ: ಮಕ್ಕಳು ಸಾಂಸ್ಕೃತಿಕ, ಆಟೋಟ ಇನ್ನಿತರ ಚಟುವಟಿಕೆಗೆ ಎಷ್ಟು ಒತ್ತು ಕೊಡಬೇಕು ಅಷ್ಟು ಕೊಟ್ಟು, ಇನ್ನುಳಿದ ಹೆಚ್ಚಿನ ಅವಧಿಯನ್ನು ಕಲಿಕೆಗೆ ನೀಡಬೇಕು ಎಂದು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಹೇಳಿದರು.

ಪಟ್ಟಣದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿ ಗವಿಮಠದಲ್ಲಿ ಆರ್.ಎಂ.ಎಸ್.ಎ. ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಶಾಲೆ ಪವಿತ್ರವಾದ ಸ್ಥಳ, ಗುರುಗಳು ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಬೇಕು. ಆದರೆ ಸರ್ಕಾರ ಶಿಕ್ಷಕರಿಗೆ ನೀಡುವ ಇತರ ಕೆಲಸಗಳಿಂದ ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಲು ಸಾಧ್ಯವಾಗುತ್ತಿಲ್ಲ. ಇದು ಬದಲಾಗಬೇಕು. ಎಸ್‌ಎಸ್‌ಎಲ್‌ಸಿ ಹಂತ ತುಂಬಾ ಪ್ರಮುಖವಾದುದು ಎಂದರು.

ನಿವೃತ್ತ ಆರ್‌ಟಿಒ ಅಧಿಕಾರಿ ಬಿ.ಡಿ. ಹರ್ತಿ ಮಾತನಾಡಿ, ಶೈಕ್ಷಣಿಕ ವಿಷಯದಲ್ಲಿ ಗದಗ ಜಿಲ್ಲೆ ಇನ್ನೂ ಹಿಂದೆ ಇದೆ, ಶಾಲೆಗಳಲ್ಲಿ ವ್ಯವಸ್ಥೆ ಇದೆ. ಅದೇ ನಿಟ್ಟಿನಲ್ಲಿ ಮಕ್ಕಳ ಕಲಿಕೆಯಲ್ಲಿ ಸಾಕಷ್ಟು ಚಿಂತನೆ ನಡೆಸಬೇಕಾಗಿದೆ. ಮಕ್ಕಳ ಶಿಕ್ಷಣ ನೀಡುವಲ್ಲಿ ಪಾಲಕರ ಸಹಕಾರವೂ ಬೇಕು. ಮಕ್ಕಳು ಶೈಕ್ಷಣಿಕವಾಗಿ ಇನ್ನೂ ಹಚ್ಚು ಪ್ರಗತಿ ಹೊಂದಬೇಕು ಎಂದು ಹೇಳಿದರು.

ಪಪಂ ಮಾಜಿ ಸದಸ್ಯ ಕೆ.ಎಲ್. ಕರಿಗೌಡರ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಉನ್ನತ, ಗುಣಮಟ್ಟದ ಶಿಕ್ಷಣ ನೀಡಿ, ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.ಗೌರಮ್ಮ ಬಡ್ನಿ, ಅಶೋಕ ಸೊನಗೋಜಿ, ರಾಮಣ್ಣ ಕಮಾಜಿ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಸುಂಕಾಪುರ, ಷಣ್ಮುಖಪ್ಪ‌ ಬಡ್ನಿ, ಎನ್.ಆರ್. ದೇಶಪಾಂಡೆ, ಫಕ್ಕೀರಯ್ಯ ಅಮೋಘಿಮಠ, ಅಶೋಕ ಹುಣಸಿಮರದ, ಮಹಾಂತಪ್ಪ‌ ನೀಲಗುಂದ, ಎ.ಡಿ. ಮುಜಾವರ, ಹೊನ್ನಪ್ಪ ಜೋಗಿ, ವಿ.ಡಿ. ಕಣವಿ, ಮಲ್ಲಪ್ಪ ಕುಂದಗೋಳ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಠದಲ್ಲಿ ಗುರುಶಾಂತವೀರ ಶ್ರೀಗಳ ಅಂತ್ಯಕ್ರಿಯೆ
ಸಿದ್ಧೇಶ್ವರ ಜಾತ್ರೆಯಲ್ಲಿ ಭಾರ ಎತ್ತುವ ಸ್ಪರ್ಧೆ