ರಸ್ತೆ ದಾಟುತಿದ್ದ ವೇಳೆ ಜಿಂಕೆಗೆ ಬೈಕ್‌ ಡಿಕ್ಕಿ: ರಕ್ಷಿಸಿ ಚಿಕಿತ್ಸೆ

KannadaprabhaNewsNetwork |  
Published : May 10, 2024, 01:34 AM IST
ಫೋಟೋ:9ಕೆಪಿಎಸ್ಎನ್ಡಿ2:  | Kannada Prabha

ಸಾರಾಂಶ

ಸಿಂಧನುರಿನ ಪಶುಆಸ್ಪತ್ರೆಯಲ್ಲಿ ಗಾಯಗೊಂಡ ಜಿಂಕೆಗೆ ವನಸಿರಿ ತಂಡದ ಸದಸ್ಯರು ಚಿಕಿತ್ಸೆ ಕೊಡಿಸುತ್ತಿರುವುದು

ಸಿಂಧನೂರು: ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಕೆಪಿ ಮುಂಭಾಗದಲ್ಲಿ ಗುರುವಾರ ಜಿಂಕೆಯೊಂದು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಸಣ್ಣಪುಟ್ಟ ಗಾಯಗಳಾಗಿದ್ದು ವನಸಿರಿ ಫೌಂಡೇಶನ್ ತಂಡದವರು ಜಿಂಕೆಯನ್ನು ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ರಕ್ಷಿಸಿದರು.

ಬಿಸಿಲಿನ ತಾಪಮಾನದಿಂದಾಗಿ ನೀರಿನ ದಾಹ ತೀರಿಸಿಕೊಳ್ಳಲು ಪಶು-ಪಕ್ಷಿಗಳು ಕಾಡಿನಿಂದ ನಾಡಿನ ಕಡೆ ಬರುತ್ತಿವೆ. ಜಿಂಕೆಯು ಸಹ ಬಂದಿದ್ದು, ರಸ್ತೆ ದಾಟುವಾಗ ಬೈಕ್ ಡಿಕ್ಕಿಯಿಂದ ತೀವ್ರ ಗಾಯಗಳಾಗಿದ್ದವು. ವನಸಿರಿ ಫೌಂಡೇಶನ್‌ ಸಂಸ್ಥಾಪಕ ಅಮರೇಗೌಡ ಮಲ್ಲಾಪುರ, ಕಾಂಗ್ರೆಸ್ ಮುಖಂಡ ಗಂಗಾಧರ ಮುದಿಯಪ್ಪ ಹೊಸಳ್ಳಿ, ರಾಜು, ಕೈಫ್, ಪೊಲೀಸ್ ಇಲಾಖೆಯ ಅಧಿಕಾರಿಗಳು ಸಕಾಲಕ್ಕೆ ಗಾಯಗೊಂಡ ಜಿಂಕೆಯನ್ನು ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಪುನಃ ಅದನ್ನು ಜೋಳದರಾಶಿ ಆಜಂನೇಯ ದೇವಸ್ಥಾನದ ಹಿಂಭಾಗದಲ್ಲಿರುವ ಹಳ್ಳದ ದಡದಲ್ಲಿ ಬಿಡಲಾಯಿತು ಎಂದು ಮಲ್ಲಾಪುರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿನ ಅಂಕು-ಡೊಂಕು ತಿದ್ದಲು ಶಿಕ್ಷಣವಂತರಾಗಿ
ಕುವೆಂಪು ಕರ್ನಾಟಕದ ಅಮೂಲ್ಯ ಆಸ್ತಿ