ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ, ಕಾಂತರಾಜ ಆಯೋಗದ ವರದಿ, ಹಿಂದುಳಿದ ಜಾತಿ ವರ್ಗಗಳ ಅಭಿವೃದ್ಧಿಗೆ ದಾರಿದೀಪವಾಗಿದೆ. ಆದರೆ ಈ ವರದಿ ಜಾರಿಯಾಗದಂತೆ ಕೆಲವು ಬಲಾಢ್ಯ ಶಕ್ತಿಗಳು ಷಡ್ಯಂತ್ರ ನಡೆಸಿವೆ, ಮೇಲ್ವರ್ಗಗಳ ಕೆಲವು ಮಂತ್ರಿಗಳು, ಶಾಸಕರು ಹಾಗೂ ಕೆಲವು ಮಠಾಧೀಶರು ಹಾಗೂ ಒಕ್ಕಲಿಗರು ವರದಿ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅದರಲ್ಲಿ ಮುಂಚೂಣಿಯಲ್ಲಿರುವವರು ಶಾಸಕ ಶಾಮನೂರು ಶಿವಶಂಕರಪ್ಪ, ಈಗವರು ತಮ್ಮ ಸೊಸೆಗೆ ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಟಿಕೆಟ್ ಕೊಡಿಸಿದ್ದಾರೆ. ಒಂದು ವೇಳೆ ಅವರು ಗೆದ್ದರೆ ಹಿಂದುಳಿದ ವರ್ಗದ ಅಭಿವೃದ್ಧಿಗೆ ಕಾರಣವಾಗಿರುವ ವರದಿ ಅನುಷ್ಠಾನಗೊಳಿಸುವಲ್ಲಿ ಬೆಂಬಲ ಕೊಡಿಸುತ್ತಾರೆಯೇ ಎಂದು ಅವರು ಪ್ರಶ್ನಿಸಿದರು. ಹಿಂದುಳಿದ ವರ್ಗದ ಮತದಾರರು ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಪ್ರಶ್ನಿಸಿ ಅವರಿಂದ ಉತ್ತರ ಪಡೆಯಬೇಕು ಎಂದು ಮನವಿ ಮಾಡಿದರು.
ಶತಮಾನಗಳಿಂದ ಸಾಮಾಜಿಕ, ಶೈಕ್ಷಣಿಕ, ಹಾಗೂ ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಹಿಂದುಳಿದ ಜಾತಿಗಳಿಗೆ ಯಾವುದೇ ಸವಲತ್ತುಗಳು ಸಿಗಬಾರದು ಎನ್ನುವುದು ಶಾಮನೂರು ಶಿವಶಂಕರಪ್ಪ ಹಾಗೂ ಸಂವಿಧಾನ ವಿರೋಧಿ ಬಿಜೆಪಿ ಉದ್ಧೇಶವಾಗಿದೆ ಎಂದು ಆರೋಪಿಸಸಿದರು. ಕಾಂತರಾಜ ವರದಿ ವಿರೋಧಿಸಿದವರಲ್ಲಿ ಕೆ.ಎಸ್.ಈಶ್ವರಪ್ಪ ಅವರೂ ಒಬ್ಬರು, ಅವರಿಗೂ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲಿ ವಿರೋಧಿಸುವಂತೆ ಕರೆ ನೀಡುವುದಾಗಿ ಹೇಳಿದರು.ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಬೆಂಬಲಿಸಲು ಮನವಿ:
ನಮ್ಮ ನಿಜವಾದ ಹೋರಾಟ ಚುನಾವಣೆ ನಂತರದಲ್ಲಿ ಚಾಲ್ತಿಗೆ ಬರಲಿದೆ. ಈ ಹೋರಾಟ ಬಹಳ ಗಂಭೀರವಾಗಿ ನಡೆಯಲಿದೆ ಎಂದ ಅವರು, ಮೇಲ್ವರ್ಗದವರು ಶೇ.4.5ರಷ್ಟು ಇದ್ದರೂ, ಅವರು ಮೀಸಲಾತಿ ಕೇಳದಿದ್ದರೂ ಅವರಿಗೆ ಪ್ರಧಾನಿ ಮೋದಿಯವರು ಶೇ.10ರಷ್ಟು ಮೀಸಲಾತಿ ಕೊಟ್ಟರು, ಇದು ಸರಿಯೇ ಎಂದು ಪ್ರಶ್ನಿಸಿದ ಅವರು, ಯಾವ ಜಾತಿಯಾಗಲಿ ಅವರವರ ಸಂಖ್ಯೆಗನುಗುಣವಾಗಿ ಮೀಸಲಾತಿ ನೀಡಬೇಕು ಆಗ ಮಾತ್ರ ಡಾ.ಅಂಬೇಡ್ಕರ್ ಅವರ ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು ಆಶಯ ಈಡೇರಿದಂತಾಗುತ್ತದೆ ಎಂದು ಹೇಳಿದರು.
ತಮ್ಮ ವೇದಿಕೆ ಯಾವುದೇ ಜಾತಿ ಧರ್ಮ, ರಾಜಕೀಯ ಪಕ್ಷಗಳ ವಿರೋಧಿಗಳಲ್ಲ ಆದರೆ ಸಂವಿಧಾನ ಬದ್ಧವಾಗಿ ಹಿಂದುಳಿದ, ಅಲ್ಪಸಂಖ್ಯಾತರಿಗೆ ನ್ಯಾಯಯುತವಾಗಿ ಸಿಗಬೇಕಾದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕ ಸೌಲಭ್ಯ ದೊರೆಯುವಂತಾಗಿ ಸ್ವಸ್ಥ ಸಮಾಜ ನಿರ್ಮಾಣವಾಗಬೇಕು ಎಂಬುದೇ ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ ತೀ.ನ. ಶ್ರೀನಿವಾಸ, ಕಾರ್ಯದರ್ಶಿ ವಿಜಯಕುಮಾರ್, ಉಪಾಧ್ಯಕ್ಷರಾದ ಪ್ರೊ. ಜಿ. ಪರಮೇಶ್ವರಪ್ಪ, ಪ್ರೊ. ಉಮೇಶ್ಯಾಗದವ್, ಪ್ರೊ. ಪ್ರಭಾಕರ್, ಸಂಚಾಲಕ ಆರ್.ಟಿ. ನಾಗರಾಜ್, ಚನ್ನವೀರಪ್ಪ, ರಾಮಕೃಷ್ಣ ಉರಣಕರ್, ಜನಮೇಜಿರಾವ್ ಉಪಸ್ಥಿತರಿದ್ದರು.