ಹುಬ್ಬಳ್ಳಿ:
ಈ ಭೂಮಿ ನಳನಳಿಸಲು ಹೇಗೆ ನಿತ್ಯ ಸೂರ್ಯನ ಬೆಳಕಿನ ಕಿರಣಗಳು ಅನಿವಾರ್ಯವೋ ಹಾಗೆ ಈ ಸಮಾಜದ ಚಲನೆ ನಿರಂತವಾಗಿರಬೇಕಾದರೆ ಕಾರ್ಮಿಕ ವರ್ಗದ ಬೆವರು ಅಗತ್ಯವಿದೆ. ಕಾರ್ಮಿಕರು ಕೇವಲ ವ್ಯಕ್ತಿಯಲ್ಲ ಅದೊಂದು ಶಕ್ತಿ. ನಾವು ಈ ಸಂದರ್ಭದಲ್ಲಿ ಮಲಗಿದರೆ ಮತ್ತೆ ಮೇಲೆಳಲು ಸಾಧ್ಯವಿಲ್ಲ ಎಂದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಜನಸಾಮಾನ್ಯರು ಬಳಸುವ ಆಹಾರ ಧಾನ್ಯಗಳ ದರಗಳು ಶೇ. 71ರಷ್ಟು ಏರಿಯಾಗಿದ್ದರೆ ಅವರ ವೇತನ ಮಾತ್ರ ಶೇ. 37ರಷ್ಟು ಹೆಚ್ಚಳವಾಗಿದೆ. ಬಿಜೆಪಿ ನೇತೃತ್ವದ ಸರ್ಕಾರ ಜಾರಿಮಾಡುತ್ತಿರುವ ಶ್ರೀಮಂತ ಪರವಾದ ನೀತಿಗಳು ಕಾರ್ಮಿಕರ ದೈನಂದಿನ ಬದುಕನ್ನೇ ನಾಶಮಾಡುತ್ತಿವೆ. ಕಾರ್ಮಿಕ ವರ್ಗ ತನ್ನ ಹೋರಾಟಗಳಿಂದ ಗಳಿಸಿದ ಕಾನೂನು ಬದ್ಧ ಹಕ್ಕುಗಳನ್ನು ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಹೀಗಾಗಿ ಇಂತಹ ನೀತಿಗಳನ್ನು ನಿಯಂತ್ರಣ ಮಾಡುವ ರಾಜಕೀಯವನ್ನು ಸೋಲಿಸುವ ಕರ್ತವ್ಯವನ್ನು ಕಾರ್ಮಿಕ ವರ್ಗ ನಿರ್ವಹಿಸಬೇಕಿದೆ ಎಂದು ಹೇಳಿದರು.ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಅಧ್ಯಕ್ಷತೆ ವಹಿಸಿದ್ದ ಹಿರಿಯ ರೈತ ಮುಖಂಡ ಬಿ.ಎಸ್. ಸೊಪ್ಪಿನ, ಟಿಯುಸಿಸಿ ಜಿಲ್ಲಾ ಅಧ್ಯಕ್ಷ ಅಶೋಕ ಬಾರ್ಕಿ, ಆರ್.ಎಫ್. ಕವಳಿಕಾಯಿ, ಎ.ಎಸ್. ಪೀರಜಾದೆ, ಅಮೃತ ಇಜಾರಿ, ಬತುಲ್ ಕಿಲ್ಲೆದಾರ, ಚಿದಾನಂದ ಸವದತ್ತಿ ಮಾತನಾಡಿದರು.