ಕನ್ನಡಪ್ರಭ ವಾರ್ತೆ ಮಧುಗಿರಿ
ಮಂಗಳವಾರ ಮಧುಗಿರಿ-ಹಿಂದೂಪುರ ರಸ್ತೆಯಲ್ಲಿರುವ ಹಾಲು ಶೀಥಲೀಕರಣ ಕೇಂದ್ರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹಾಲು ಉತ್ಪಾದಕರಲ್ಲದವರು ಕೆಲವು ದಿನಗಳ ಹಿಂದೆ ಇಲ್ಲಿನ ಸಂಘಕ್ಕೆ ಬಂದು ಹಣ ಪಾವತಿಸುವಂತೆ ಒತ್ತಾಯಿಸಿದ್ದರು. ಆದರೆ ಸಹಕಾರ ಸಂಘಗಳ ರಾಜ್ಯ ಸರ್ಕಾರದ ನಿರ್ದೇಶನದಂತೆ ಕೊಂಡವಾಡಿ ಹಾಲು ಉತ್ಪಾದಕರ ಸಂಘದ ವಿರುದ್ಧ ಕೆಲವರು ನ್ಯಾಯಾಲಯದ ಮೊರೆ ಹೋಗಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದರು. ನ್ಯಾಯಾಲಯವು ಆರೋಪ -ಪ್ರತ್ಯಾರೋಪಗಳನ್ನು ಪರಿಶೀಲಿಸಿ ಸಂಘಕ್ಕೆ ಆಡಳಿತಾಧಿಕಾರಿ ಮೂಲಕ ರೈತರಿಗೆ ಹಣ ವಿತರಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಸ್ತುತ 24 ಲಕ್ಷದ 20 ಸಾವಿರ ರುಗಳನ್ನು ಹಾಲು ಉತ್ಪಾದಕ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ನಾಗೇಶಬಾಬು ಸ್ಪಷ್ಟಪಡಿಸಿದರು.ಕೊಂಡವಾಡಿ ಹಾಲು ಉತ್ಪಾದಕ ಸಂಘದ 5 ವರ್ಷಗಳ ಆಡಳಿತಾವಧಿ ಮುಕ್ತಾಯವಾಗಿದ್ದು, ಚುನಾವಣೆ ನಡೆಸುವಂತೆ ಸಹಕಾರ ಇಲಾಖೆ ಸೂಚಿಸಿತ್ತು. ನಂತರ ನಿಯಮನುಸಾರ ಆಡಳಿತಾಧಿಕಾರಿ ನೇಮಿಸಿತ್ತು. ಆದರೆ ಸಂಘದ ಕಾರ್ಯದರ್ಶಿ ಆಡಳಿತಾಧಿಕಾರಿಗೆ ಸಂಘದ ಪುಸ್ತಕ ,ಲೆಕ್ಕ ಪತ್ರಗಳು ನನ್ನ ಬಳಿ ಇಲ್ಲ, ಮಾಜಿ ಅಧ್ಯಕ್ಷರ ಬಳಿ ಇವೆ ಎಂದು ಹೇಳಿ, ಸಬೂಬು ಹೇಳಿಕೊಂಡು ಕಾಲಹರಣ ಮಾಡಿದ್ದೂ ಸಹ ಹಾಲಿನ ಹಣ ವಿತರಣೆಗೆ ಕಾರಣವಾಗಿತ್ತು ಎಂದು ದೂರಿದರು.
ಮಾಜಿ ಸಚಿವ,ಶಾಸಕ ಕೆ.ಎನ್.ರಾಜಣ್ಣ ಅವರ ದೂರ ದೃಷ್ಠಿಯಿಂದ ತಾಲೂಕಿನ 172 ಸಹಕಾರಿ ಸಂಘಗಳಲ್ಲಿ ನೂತನ ತಂತ್ರಾಂಶ,ಆನ್ಲೈನ್ ಅಳವಡಿಸಿಕೊಂಡ ನಂತರ ಲಾಭಂಶ ಗಳಿಸುವಲ್ಲಿ ಸಂಘಗಳು ಮಂಚೋಣಿಯಲ್ಲಿವೆ. ಪ್ರತಿ ವರ್ಷ ನಡೆಯುವ ವಾರ್ಷಿಕ ಸಭೆಗಳಲ್ಲಿ ಖುದ್ದು ಭಾಗವಹಿಸಲಾಗಿದೆ. ರಾಜಣ್ಣ ಅವರು ಸಚಿವರಾಗಿದ್ದಾಗ 28 ಹಾಲು ಉತ್ಪಾದಕ ಸಂಘಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ತುಮುಲ್ನಿಂದ 5 ಲಕ್ಷ, ಕೆಎಂಎಫ್ನಿಂದ 5 ಲಕ್ಷ ಹಾಗೂ ಕೆಲವು ಸಂಘಗಳಿಗೆ ವಿಶೇಷ ಅನುದಾನ ಒದಗಿಸಿ ಕಟ್ಟಡ ನಿರ್ಮಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ರಾಧಾಮಣಿ, ನಾಗಣ್ಣ, ತಿಪ್ಪೇಸ್ವಾಮಿ, ಸದಾಶಿವ, ರವಿಕುಮಾರ್, ರಾಜಶೇಖರ್, ಪ್ರಸನ್ನಕುಮಾರ್, ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ ಇತರರಿದ್ದರು.