ಕನ್ನಡಪ್ರಭ ವಾರ್ತೆ ಕುಷ್ಟಗಿ
ಬಸವ ಸಮಿತಿಯ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್ ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವಣ್ಣನ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯವಾಗಿದ್ದು, ಕೂಡಲೇ ಕ್ಷಮೆ ಕೇಳಬೇಕು ಎಂದು ಹೇಳಿದರು.
ಬಸವಣ್ಣ ನವರಂಗ ನೀವು ಹೋಗಿ ಹೊಳ್ಯಾಗ ಜಿಗೀರಿ ಎಂದು ಅತ್ಯಂತ ಅವಹೇಳನಾಕಾರಿ ಹೇಳಿಕೆ ನೀಡುವ ಮೂಲಕ ಬಸವಣ್ಣನವರಿಗೆ ಅಪಚಾರ ಮಾಡಿದ್ದಾರೆ. ಇದು ಬಸವ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಕೂಡಲೇ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಟಿ. ಬಸವರಾಜ ಮಾತನಾಡಿ, ಮಾನವತಾವಾದಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಇತಿಹಾಸವನ್ನು ಅರಿಯದ ಶಾಸಕ ಯತ್ನಾಳ ಇಂತಹ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅದನ್ನು ಸಮರ್ಥಿಸಿಕೊಂಡಿರುವ ಶಾಸಕರ ಅನುಚಿತ ವರ್ತನೆ ಅಕ್ಷಮ್ಯ ಅಪರಾಧವಾಗಿದೆ ಎಂದರು.
ಈ ಸಂದರ್ಭ ಮಹಾದೇವಪ್ಪ ಮಹಾಲಿಂಗಪೂರ, ಕಳಕನಗೌಡ ರೆಡ್ಡೆರ, ಶರಣಪ್ಪ ಜಿಗೇರಿ, ಮಹಾದೇವಪ್ಪ ಸೇರಿದಂತೆ ಬಸವ ಸಮಿತಿಯ ಹಾಗೂ ಜಾಗತಿಕ ಲಿಂಗಾಯತ ಸಮುದಾಯದ ಪ್ರಮುಖರು ಹಾಗೂ ಬಸವಣ್ಣನ ಅನುಯಾಯಿಗಳು ಇದ್ದರು.