ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಈ ವೇಳೆ ಮಾತನಾಡಿ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ರಾಜು ಪವಾರ, ಪ್ರಸ್ತುತ ಚಳಿಗಾಲ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆ ಘೋಷಣೆ ಆಗಬೇಕು, ಇದಕ್ಕೆ ತಪ್ಪಿದಲ್ಲಿ ಎಲ್ಲ ರೈತರೊಂದಿಗೆ ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ರೈತ ಸಂಘದ ತಾಲೂಕಾ ಅಧ್ಯಕ್ಷ ಮನೋಜ ಮನಗುಳಿ ಮಾತನಾಡಿ, ಕರ್ನಾಟಕ ಸರ್ಕಾರ ಉಳಿದಿರುವ ಎರಡು ದಿನದ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯನ್ನು ಘೋಷಿಸಿ, ಬೇಕಾಗುವ ಮೂಲಭೂತ ಸೌಕರ್ಯಗಳಾದ ಆರೋಗ್ಯ, ಶಿಕ್ಷಣ, ನೀರಾವರಿ, ಕೈಗಾರಿಕೆ ಮತ್ತು ಉದ್ಯೋಗ ಇವುಗಳನ್ನು ನೀಡುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ತಾಲೂಕು ಮುಖಂಡರಾದ ಸಿದ್ರಾಮ ಕರಗಾಂವಿ, ಕಲಗೌಡಾ ಪಾಟೀಲ, ಸಹಾದೇವ ಚಿಮ್ಮಟ, ಶಿವಗೌಡ ಪಾಟೀಲ, ವಿನಾಯಕ ಪಾಟೀಲ, ಕೆಂಪ್ಪಣ್ಣ ಕಾಮಗೌಡ, ಕೆಂಚಪ್ಪ ಕಾಮಗೌಡ, ಬಾಳೇಶ ಚನ್ನವರ, ಸಂತೋಷ ಮಠದ, ಅಶೋಕ ದಂಡಿನವರ, ಸತಿಗೌಡಾ ಬಸಗೌಡನವರ, ಶಂಕರ ಪಡೇದ, ಅಧ್ಯಕ್ಷ ಸಂಜು ಬಡಿಗೇರ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಚಂದ್ರಶೇಖರ ಅರಭಾಂವಿ, ಮಹಾದೇವ ಬರಗಾಲೆ, ಸಿದಗೌಡಾ ಪಾಟೀಲ, ಶಿವು ಮದಾಳೆ, ಸಿದ್ದು ಕಾಂಬಳೆ, ಸಂತೋಷ ಅಕ್ಕೆ, ಅಮೂಲ ನಾವಿ, ಡಿ.ಎ.ಮಾನೆ, ಅನೀಲ ನಾವಿ ಸೇರಿದಂತೆ ನೂರಾರು ಹೋರಾಟಗಾರರು ಉಪಸ್ಥಿತರಿದ್ದರು.