ಬಿ.ವೈ.ವಿಜಯೇಂದ್ರ, ಆರ್‌.ಅಶೋಕ ವಜಾಗೆ ಆಗ್ರಹ

KannadaprabhaNewsNetwork |  
Published : May 06, 2026, 02:30 AM IST
ಕೊಟ್ಟೂರಿನಲ್ಲಿ ಬೆಜೆಪಿ ಹಿರಿಯ ಮುಖಂಡ ಎಸ್ ತಿಂದಪ್ಪ ಸಿದ್ದಿಗೋಷ್ಠಿ ನಡೆಸಿದರು  | Kannada Prabha

ಸಾರಾಂಶ

ಉಪಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವರಿಷ್ಠರಿಗೆ ವಾಸ್ತವ ಸಂಗತಿಯ ಮಾಹಿತಿ ನೀಡದ ಈ ಇಬ್ಬರು ಇರುವವರೆಗೂ ಪಕ್ಷಕ್ಕೆ ಖಂಡಿತ ಭವಿಷ್ಯವಿಲ್ಲ

ಕೊಟ್ಟೂರು: ದಾವಣಗೆರೆ, ಬಾಗಲಕೋಟೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ರಾಜ್ಯದ ಅಸಮರ್ಥ ನಾಯಕತ್ವ ಮತ್ತು ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗದಿರುವ ಅಸಂಘಟನೆ ಕಾರಣ ಎಂದು ಸ್ಪಷ್ಟವಾಗಿದೆ. ಪಕ್ಷದ ವರಿಷ್ಠರು ಈ ಕಾರಣದಿಂದ ಬಿಜೆಪಿ ರಾಜ್ಯ ಘಟಕವನ್ನು ವಿಸ್ತರಿಸಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಹಿರಿಯ ಮುಖಂಡ ಎಸ್.ತಿಂದಪ್ಪ ಹೇಳಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸ್ವಹಿತಾಸಕ್ತಿಗೆ ಒತ್ತು ನೀಡಿ ಉಪಚುನಾವಣೆ ಪ್ರಚಾರ ಕಾರ್ಯದಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ. ಉಪಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವರಿಷ್ಠರಿಗೆ ವಾಸ್ತವ ಸಂಗತಿಯ ಮಾಹಿತಿ ನೀಡದ ಈ ಇಬ್ಬರು ಇರುವವರೆಗೂ ಪಕ್ಷಕ್ಕೆ ಖಂಡಿತ ಭವಿಷ್ಯವಿಲ್ಲ ಎಂದರು.

ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿ ಸಾಮಾನ್ಯ ವರ್ಗದ ವ್ಯಕ್ತಿಯನ್ನು ಆಯ್ಕೆ ಮಾಡದೇ ಅನಗತ್ಯವಾಗಿ ಮೀಸಲು ಪಂಗಡದ ಅಭ್ಯರ್ಥಿಗೆ ಪಕ್ಷದ ಟಿಕೆಟ್ ನೀಡಿ ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದು ಸಹಜವಾಗಿ ಸಾಮಾನ್ಯ ವರ್ಗದ ಮತದಾರರು ಪಕ್ಷದ ಅಭ್ಯರ್ಥಿಗೆ ಮತ ನೀಡಲು ಮುಂದಾಗಿಲ್ಲ. ಗೆಲ್ಲಬೇಕಿದ್ದ ಈ ಸ್ಥಾನ ಆಡಳಿತ ಪಕ್ಷಕ್ಕೆ ಸುಲಭವಾಗಿ ದೊರಕುವಂತಾಯಿತು ಎಂದರು.

ರಾಜ್ಯಾಧ್ಯಕ್ಷ ಬಿ.ವೈ. ವಿಜೇಂದ್ರ ಅವರನ್ನು ಬದಲಾಯಿಸಬೇಕು. ಇಲ್ಲವೇ ರಾಜ್ಯ ಘಟಕವನ್ನು ಸಂಪೂರ್ಣ ವಿಸರ್ಜಿಸಿ ಹೊಸ ಸಮಿತಿ ರಚಿಸಬೇಕು. ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರನ್ನು ಕೆಳಗಿಳಿಸಬೇಕು. ಸಮರ್ಥ ಶಾಸಕರ ದೊಡ್ಡ ಪಡೆ ಪಕ್ಷದಲ್ಲಿದ್ದು, ಅಂತವರಿಗೆ ವಿರೋಧ ಪಕ್ಷದ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಹರಾಳು ಬಸವರಾಜ, ಗಂಗಮ್ಮನಹಳ್ಳಿ ಸಿದ್ದಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ಆರಂಭಕ್ಕೂ ಮೊದಲು ತ್ವರಿತ ಕಾಮಗಾರಿಗೆ ಸಚಿವ ಸೂಚನೆ
ಫೈರಿಂಗ್ ರೇಂಜ್ ಎನ್‌ಸಿಸಿಗೆ ಅತ್ಯುಪಯುಕ್ತ: ಪ್ರೊ.ಅಶೋಕ್ ಸಂಗಪ್ಪ