ಕನ್ನಡಪ್ರಭ ವಾರ್ತೆ ಉಡುಪಿ
ವೇದಿಕೆಯಲ್ಲಿ ಮೀನುಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಮುಖಂಡರಾದ ಅನ್ವರ್ ಕಟಪಾಡಿ, ಇಸ್ಮಾಯಿಲ್ ಕಾಪು, ಇಕ್ಬಾಲ್ ಉಡುಪಿ ಉಪಸ್ಥಿತರಿದ್ದರು.ಆಗ್ರಹ ನಿರ್ಣಯಗಳು:ಮೀನುಗಾರರಿಗೆ ಹಾಗೂ ಮೀನು ಕಾರ್ಮಿಕರಿಗೆ ಮತ್ತು ಮೀನುಗಾರಿಕೆಯಲ್ಲಿ ಕೆಲಸ ಮಾಡುವ ಎಲ್ಲ ವಿಭಾಗದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಾಗಿ ಕಲ್ಯಾಣ ಮಂಡಳಿಯೊಂದನ್ನು ರಾಜ್ಯದಲ್ಲಿ ರಚಿಸಬೇಕು, ತನ್ಮೂಲಕ ಅಪಘಾತ ಸಂಭವಿಸಿದಲ್ಲಿ ಪರಿಹಾರ, ವಸತಿ, ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಹೆಣ್ಣು ಮಕ್ಕಳಿಗೆ ಮದುವೆ ಸಹಾಯಧನ ಸವಲತ್ತುಗಳನ್ನು ನೀಡಬೇಕು.
ಮೀನುಗಾರರಿಗೆ ಹಾಗೂ ಮೀನು ಕಾರ್ಮಿಕರಿಗೆ 60 ವರ್ಷ ಪ್ರಾಯದ ನಂತರ ತಿಂಗಳಿಗೆ 6000 ರು. ಪಿಂಚಣಿ ನೀಡಬೇಕು, ಅಪಘಾತದಲ್ಲಿ ಮರಣ ಹೊಂದಿದ್ದಲ್ಲಿ 20 ಲಕ್ಷ ರು. ಪರಿಹಾರ ನೀಡಬೇಕು, ಕೇಂದ್ರ ಸರ್ಕಾರ ಮೀನುಗಾರಿಕಾ ಉದ್ಯಮಕ್ಕಿರುವ ಆರ್ಥಿಕ ಪಾಲು ಹೆಚ್ಚಿಸಬೇಕು, ಮಳೆಗಾಲದಲ್ಲಿ 3 ತಿಂಗಳು ಮೀನುಗಾರರ ಕುಟುಂಬಕ್ಕೆ ಉಚಿತ ರೇಷನ್ ನೀಡಬೇಕು ಎಂಬಿತ್ಯಾದಿ 15 ಬೇಡಿಕೆಗಳ ನಿರ್ಣಯಗಳನ್ನು ಸಭೆಯಲ್ಲಿ ಮಂಡಿಸಲಾಯಿತು.