ಬೇಡಿಕೆ ಈಡೇರಿಕೆಗೆ ಏ.20 ಗುಡುವು

KannadaprabhaNewsNetwork | Published : Apr 11, 2025 12:36 AM

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ: ನಷ್ಟವಾದ ತೊಗರಿ ಬೆಳೆಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ವಿಮಾ ಕಂಪನಿಯಿಂದ ರೈತರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ರಾಜ್ಯ ಬೀಜ ನಿಗಮದಿಂದ ಕೃಷಿ ಇಲಾಖೆಗೆ ಸರಬರಾಜು ಮಾಡಿದ ಕಳಪೆ ತೊಗರಿ ಬೀಜದ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ನೇತೃತ್ವದಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಹೋರಾತ್ರಿ ಧರಣಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಇಂಡಿ: ನಷ್ಟವಾದ ತೊಗರಿ ಬೆಳೆಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ವಿಮಾ ಕಂಪನಿಯಿಂದ ರೈತರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ರಾಜ್ಯ ಬೀಜ ನಿಗಮದಿಂದ ಕೃಷಿ ಇಲಾಖೆಗೆ ಸರಬರಾಜು ಮಾಡಿದ ಕಳಪೆ ತೊಗರಿ ಬೀಜದ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ನೇತೃತ್ವದಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಹೋರಾತ್ರಿ ಧರಣಿ ನಡೆಸಲಾಯಿತು.

ಈ ವೇಳೆ ಸ್ಥಳಕ್ಕೆ ಎಸಿ ಅನುರಾಧಾ ವಸ್ತ್ರದ, ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ಕೆಬಿಜೆಎನ್ಎಲ್ ಎಇಇ ಭೇಟಿ ನೀಡಿ, ಬೇಡಿಕೆ ಈಡೇರಿಸುವ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬಗೆ ಹರಿಸುವ ಭರವಸೆ ನೀಡಿದ ಮೇಲೆ ಧರಣಿಯನ್ನು ಹಿಂಪಡೆಯಲಾಯಿತು. ಇಂಡಿಯ ಎಲ್ಲಾ ಶಾಖಾ ಕಾಲುವೆಗೆ ಹಾಗೂ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕು. ಇಂಡಿ ತಾಲೂಕಿನಲ್ಲಿ ಕಳೆದ 40 ವರ್ಷದಿಂದ ಭೀಕರ ಬರಗಾಲವಿದ್ದು, ಪ್ರತಿ ವರ್ಷ ಬೇಸಿಗೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಿರತರ ಮನವೊಲಿಸಿ ಎಸಿ ಅವರು ಎಳೆ ನೀರು ನೀಡಿ ಧರಣಿ ಅಂತ್ಯಗೊಳಿಸಲಾಯಿತು.ಈ ವೇಳೆ ಮಾತನಾಡಿದ ಎಸಿ ಅನುರಾಧಾ ವಸ್ತ್ರದ, ತಮ್ಮ ಬೇಡಿಕೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ, ರೈತಪರ ಚಿಂತನೆ, ಕಾಳಜಿ ವಹಿಸುವ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ರೈತರ ಧ್ವನಿಯಾಗಿ ಅಧಿವೇಶನದಲ್ಲಿ ಚರ್ಚಿಸಿದ್ದಾರೆ. ಮೇಲಾಧಿಕಾರಿಗಳ ಗಮನಕ್ಕೆ ತಂದು ರೈತರ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಹೇಳಿದರು. ಬೀಜ ನಿಗಮದಿಂದ ಬರುವ ಬಿತ್ತನೆ ಬೀಜ, ಶ್ಯಾಂಪಲ್ ತಗೆದು ಗುಣಮಟ್ಟ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಅವರು ಪ್ರಮಾಣಿಕರಣ ಪತ್ರ ನೀಡಿದ ಮೇಲೆ ಬೀಜ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಬಾಳು ಮುಳಜಿ ಮಾತನಾಡಿ, ರೈತಪರ ಬೇಡಿಕೆಗಳು ಬರುವ ಏ.20ರೊಳಗೆ ಈಡೇರಿಸಬೇಕು.ಇಲ್ಲವಾದರೆ ಏ.20 ರಂದು ಇಂಡಿ ಬಂದ್ ಮಾಡಲಾಗುತ್ತದೆ. ಅಧಿಕಾರಿಗಳು ಭರವಸೆ ನೀಡಿದಕ್ಕಾಗಿ ಧರಣಿ ತಾತ್ಕಾಲಿಕವಾಗಿ ಹಿಂಪಡೆಯಲಾಗುತ್ತದೆ ಎಂದು ಹೇಳಿದರು. ಎಸಿ ಅನುರಾಧಾ ವಸ್ತ್ರದಗೆ ಮನವಿ ಸಲ್ಲಿಸಿದರು.

ಅನಿಲಗೌಡ ಬಿರಾದಾರ, ಧರ್ಮು ಸಾಲೋಟಗಿ, ಮಂಜು ದೇವರ, ಮಹೇಶ ಹೂಗಾರ, ಪ್ರಶಾಂತ ಲಾಳಸಂಗಿ, ಪ್ರಶಾಂತ ಗೌಳಿ, ಪ್ರದೀಪ ಬೊರುಟಿ, ಮಲ್ಲು ಚಾಕುಂಡಿ, ಮಲ್ಲು ಬಿರಾದಾರ, ಪ್ರವೀಣ್ ಭಜಂತ್ರಿ, ವಿಜಯಕುಮಾರ ರಾಠೋಡ, ಅರವಿಂದ ಪಾಟೀಲ, ರಾಮಸಿಂಗ ಕನ್ನೊಳ್ಳಿ, ಮಹೇಶ ಕುಂಬಾರ, ಅಶೋಕ ಅಕಲಾದಿ, ಮಂಜು ದೇವರ, ಮಲ್ಲು ದೇವರ, ಮಹಾದೇವ ಗುಡ್ಡೊಡಗಿ, ಶ್ರೀಕಾಂತ್ ಬಡಿಗೇರ, ಭಾಗೇಶ ಮಲಘಾಣ, ಭೀಮಾಶಂಕರ ಆಳೂರ, ಸಾಗರ ಬಿರಾದಾರ, ಗಿರೀಶ್ ಪಾಟೀಲ, ಪ್ರಶಾಂತ ಗುಂದಗಿ, ಶಾಂತೇಶ ಕ್ಷತ್ರಿ, ಕಿರಣ ಕ್ಷತ್ರಿ, ಮೊದಲಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Share this article