ರಾಣಿಬೆನ್ನೂರು: ತಾಲೂಕಿನ ಮಾಗೋಡ ಗ್ರಾಮದ ರಿ.ಸ.ನಂ. 11ಎ ಮತ್ತು 13ಎ ವ್ಯಾಪ್ತಿಯ ಸರ್ಕಾರಿ ಗೋಮಾಳ ಹಾಗೂ ಹುಲ್ಲುಗಾವಲು ಜಮೀನನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕು ಹಾಗೂ ಅದರಲ್ಲಿ ಯಾರಿಗೂ ಅವೈಜ್ಞಾನಿಕವಾಗಿ ಹಕ್ಕುಪತ್ರ, ನಿವೇಶನ ನೀಡುವುದನ್ನು ತಡೆಯಬೇಕು ಎಂದು ಆಗ್ರಹಿಸಿ ಮಾಗೋಡ ಗ್ರಾಮದ ಗೋಮಾಳ ಉಳಿಸಿ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ತಹಸೀಲ್ದಾರ್ ಆರ್.ಎಚ್.ಭಾಗವಾನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಗೋಮಾಳದಲ್ಲಿ ಮನೆ ನಿರ್ಮಿಸಿಕೊಂಡಿರುವ ಕೆಲವರು 2010-11ರಲ್ಲೇ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ರನ್ನು ಪ್ರತಿವಾದಿಗಳನ್ನಾಗಿ ಮಾಡಿ ಮನೆ, ನಿವೇಶನಗಳನ್ನು ಸಕ್ರಮಗೊಳಿಸುವಂತೆ ರಾಣಿಬೆನ್ನೂರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. 2013ರಲ್ಲಿ ನ್ಯಾಯಾಲಯ ದಾವೆಯನ್ನು ವಜಾಗೊಳಿಸಿದ್ದು, ಜಮೀನು ಗೋಮಾಳವಾಗಿಯೇ ಉಳಿಯಬೇಕೆಂಬ ಆದೇಶವಾಗಿದೆ ಎಂದು ಸಮಿತಿ ಸದಸ್ಯರು ತಿಳಿಸಿದರು. ಮಾಗೋಡ ಗ್ರಾಮದ ಹಲವು ಕುಟುಂಬಗಳಿಗೆ ಸೂಕ್ತ ಮನೆಗಳಿಲ್ಲದಿದ್ದರೂ ಗೋಮಾಳವನ್ನು ಅತಿಕ್ರಮಿಸದೆ ಇರುವ ಜಾಗದಲ್ಲಿಯೇ ವಾಸಿಸುತ್ತಿದ್ದಾರೆ. ಹೀಗಾಗಿ ನ್ಯಾಯಾಲಯದ ಹಿಂದಿನ ತೀರ್ಪುಗಳನ್ನು ಪರಿಗಣಿಸಿ ರಿ.ಸ.ನಂ. 11ಎ ಮತ್ತು 13ಎ ಜಮೀನನ್ನು ಗೋಮಾಳವಾಗಿಯೇ ಉಳಿಸಬೇಕು. ಹೊರಗಿನವರಿಗೆ ಅಥವಾ ಅರ್ಹತೆ ಇಲ್ಲದವರಿಗೆ ಹಕ್ಕುಪತ್ರ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಮನವಿ ಮಾಡಿದೆ.
ಚನ್ನಬಸನಗೌಡ ಮುದಿಗೌಡ್ರ, ಉಜ್ಜಪ್ಪ ಕಮದೋಡ, ಅಜ್ಜಪ್ಪ ಹಾಲಬಾವಿ, ನಿಜಲಿಂಗಪ್ಪ ಹಾದಿಮನಿ, ರೇವಣೆಪ್ಪ ಕರೇಗೌಡ್ರ, ನಿಂಗನಗೌಡ ಮುದಿಗೌಡ್ರ, ಮಹೇಶ ಮಲ್ಲಾಪುರ, ಹನುಮಂತಪ್ಪ ಕರ್ಜಗಿ, ಬಸಪ್ಪ ಹೊಸಗೌಡ್ರ, ರಾಮನಗೌಡ ಮುದಕನಗೌಡ್ರ, ಗುಡ್ಡಪ್ಪ ಪಾಟೀಲ, ನಾಗಪ್ಪ ಬಸನಗೌಡ್ರ, ಮಲ್ಲಕಪ್ಪ ಬ್ಯಾನಪ್ಪನವರ, ಜಗದೀಶ ಮಲ್ಲಾಪುರ, ಭೀಮಪ್ಪ ಹುಣಿಸಿಕಟ್ಟಿ, ರಾಮಪ್ಪ ಓಲೇಕಾರ, ಸಂತೋಷ ಶಿದ್ದಪ್ಪನವರ, ರೇವಣೆಪ್ಪ ಬೆನಕನಗೊಂಡ, ಗಿರೀಶ ಮುದಿಗೌಡ್ರ, ಸೋಮನಗೌಡ ಹಾಲಬಾವಿ, ನಿಂಗರೆಡ್ಡಿ ಕೆಂಚರೆಡ್ಡಿ, ಹನುಮಂತಪ್ಪ ಕೊಪ್ಪದ, ಶೇಖಪ್ಪ ಬಲ್ಲೂರ, ಕರಿಮಸಾಬ್ ಕಿಲ್ಲೇದಾರ, ರಾಮಪ್ಪ ಮುದಿಗೌಡ್ರ, ಶಿವಲಿಂಗಪ್ಪ ಮುದಿಗೌಡ್ರ, ಬಸನಗೌಡ್ರ ಪಾಟೀಲ, ಹನುಮಂತಪ್ಪ ಮಜ್ಜಿಗಿ, ಭೀಮರೆಡ್ಡಿ ಕೆಂಚರೆಡ್ಡಿ, ಹನುಮಂತಪ್ಪ ಮುದಕನಗೌಡ್ರ, ಧರ್ಮಪ್ಪ ಕೊಪ್ಪದ, ಶಿದ್ದಪ್ಪ ಅಮಾಸಿ, ಶಿವಪ್ಪ ಮುದಿಗೌಡ್ರ, ಮಲ್ಲೇಶಪ್ಪ ಹೊಸಳ್ಳಿ, ಕುರುವತೆಪ್ಪ ಕರ್ಜಗಿ ಮತ್ತಿತರರಿದ್ದರು.