ಡಾ.ಯತೀಂದ್ರ ಸಿದ್ದರಾಮಯ್ಯಗೆ ಡಿಸಿಎಂ ಮಾಡಲು ಆಗ್ರಹ

KannadaprabhaNewsNetwork |  
Published : May 31, 2026, 01:15 AM IST
2 | Kannada Prabha

ಸಾರಾಂಶ

ಅಹಿಂದ ಮತಗಳನ್ನು ಕಡೆಗಣಿಸಿದ ಪಕ್ಷಗಳು ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ. ಸ್ವಾತಂತ್ರ್ಯದ ನಂತರವೂ ಅಹಿಂದ ಸಮುದಾಯಕ್ಕೆ ಸಮಾನ ಅವಕಾಶ, ಸ್ಥಾನ ಸಿಕ್ಕಿಲ್ಲ. ಮುಂಬರುವ ಚುನಾವಣೆ?ಯಲ್ಲಿ ಕಾಂಗ್ರೆಸ್ ಅಹಿಂದ ಮತಗಳು ಬೇಕು ಎಂದರೆ ನಮ್ಮ ಬೇಡಿಕೆ ಈಡೇರಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂತರ ಅಹಿಂದ ಸಮುದಾಯದ ರಾಜಕೀಯ ನಾಯಕತ್ವವನ್ನು ಡಾ.ಯತೀಂದ್ರ ಸಿದ್ದರಾಮಯ್ಯ ಅವರು ವಹಿಸಿಕೊಳ್ಳಬೇಕು ಎಂದು ಅಹಿಂದ ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೊಗೊಳ್ಳಲಾಯಿತು. ಅಲ್ಲದೆ ಅಹಿಂದ ಸಮುದಾಯಗಳ ನಾಯಕತ್ವದ ದೃಷ್ಟಿಯಿಂದ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಪ್ರಬಲ ಖಾತೆ ನೀಡಬೇಕು. ಇತ್ತೀಚೆಗೆ ಅಹಿಂದ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಹೋರಾಟ ಮುಂದುವರೆಯಬೇಕಾದರೆ ಯತೀಂದ್ರ ಸಿದ್ದರಾಮಯ್ಯ ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಎಂದು ಕಾಂಗ್ರೆಸ್‌ ವರಿಷ್ಠರನ್ನು ಒತ್ತಾಯಿಸಿದರು.

ಅಹಿಂದ ಮತಗಳನ್ನು ಕಡೆಗಣಿಸಿದ ಪಕ್ಷಗಳು ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ. ಸ್ವಾತಂತ್ರ್ಯದ ನಂತರವೂ ಅಹಿಂದ ಸಮುದಾಯಕ್ಕೆ ಸಮಾನ ಅವಕಾಶ, ಸ್ಥಾನ ಸಿಕ್ಕಿಲ್ಲ. ಮುಂಬರುವ ಚುನಾವಣೆ?ಯಲ್ಲಿ ಕಾಂಗ್ರೆಸ್ ಅಹಿಂದ ಮತಗಳು ಬೇಕು ಎಂದರೆ ನಮ್ಮ ಬೇಡಿಕೆ ಈಡೇರಿಸಬೇಕು ಎಂದರು.

ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಶೋಷಿತ ಸಮುದಾಯಗಳಿಗೆ ಅಘಾತ ತಂದೊಡ್ಡಿದೆ. ಸ್ವಜನ ಪಕ್ಷಪಾರ, ಸ್ವಜಾತಿಯ ವ್ಯಾಮೋಹದಲ್ಲಿ ಸಿದ್ದರಾಮಯ್ಯ ಅವರು ಎಂದಿಗೂ ಆಡಳಿತ ನಡೆಸಿಲ್ಲ ಎಂದರು.

ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್‌ ಉಪ್ಪಾರ್ ಮಾತನಾಡಿ, ಸಿದ್ದರಾಮಯ್ಯ ಅವರು ತಮ್ಮ ಮಗನಿಗೆ ಸಚಿವ ಸ್ಥಾನ ನೀಡುವುದು ಬೇಡ ಎಂದು ಹೇಳುತ್ತಿರುವುದು ಅವರ ವೈಯಕ್ತಿಕ ನಿಲುವು. ಆದರೆ ಅಹಿಂದ ಸಮುದಾಯ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದರು.

ವಿಶ್ವಕರ್ಮ ಸಮುದಾಯದ ಮೊಗಣ್ಣಾಚಾರ್‌ ಮಾತನಾಡಿ, ರಾಜ್ಯದಲ್ಲಿ ನಾಲ್ಕು ಕೋಟಿ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ನಂಬಿದ್ದಾರೆ. ಸೂಕ್ಷ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲಿದೆ ಎಂಬ ನಿರೀಕ್ಷೆಯಿಂದ ಅವರ ಮೇಲಿನ ವಿಶ್ವಾಸ ಕಾರಣ ಎಂದರು.

ವಿವಿಧ ಜನಾಂಗದ ಮುಖಂಡರಾದ ಮಂಜು ಶೆಟ್ಟಿ, ಪುಟ್ಟಸ್ವಾಮಿ, ರವಿನಂದನ್, ಎಚ್.ಎಸ್. ಪ್ರಕಾಶ್, ರಾಜೇಶ್, ಶಿವಣ್ಣ, ಚೆನ್ನಪ್ಪ, ಕೃಷ್ಣ, ಚಂದ್ರು, ಲೋಕೇಶ್ ಕುಮಾರ್, ಕೆಂಡಗಣ್ಣ, ಕಾಳೇಗೌಡ, ಮಹದೇವಮ್ಮ, ಜಯಲಕ್ಷ್ಮೀ, ಛಾಯಮ್ಮ, ದೇವನೂರು ಮಹಾದೇವಮ್ಮ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಗಾದಿ: ಹರಕೆ ತೀರಿಸಿದ ಅಭಿಮಾನಿ
ನಾಳೆಯಿಂದ ಶಾಲೆ ಆರಂಭ