ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಈ ವೇಳೆ ಮಾತನಾಡಿದ ಮುನಿಕೃಷ್ಣಪ್ಪ, ಕೈವಾರ ಶ್ರೀಕ್ಷೇತ್ರ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿರುವುದರಿಂದ ಜಿಲ್ಲೆಯ ಬಸ್ ನಿಲ್ದಾಣಕ್ಕೆ ಶ್ರೀಯೋಗಿನಾರೇಯಣ ಯತೀಂದ್ರರ ಬಸ್ ನಿಲ್ದಾಣ ಎಂದು ಹೆಸರಿಡುವುದು ಸೂಕ್ತ ಎಂದರು.
ಹೆಸರಿಡಲು ಯಾರೂ ವಿರೋಧವೂ ಇಲ್ಲಸರ್ವಧರ್ಮ ಸಮನ್ವಯಕಾರರಾಗಿ ತಾತಯ್ಯ ಮಾಡಿರುವ ಸಾಧನೆ ಅಪಾರ. ಇವರ ಹೆಸರನ್ನು ಇಡಲು ಮುಂದಾದರೆ ವಿರೋಧಿಸುವವರು ಯಾರೂ ಇಲ್ಲ. ಜಿಲ್ಲೆಯ ಎಲ್ಲಾ ತಾಲೂಕಿನ ಜನರು ಸಹಿ ಮಾಡಿರುವ ಪತ್ರವನ್ನು ನಿಮಗೆ ಅರ್ಪಿಸುತ್ತಿದ್ದೇವೆ. ಚಿಕ್ಕಬಳ್ಳಾಪುರಕ್ಕೂ ಕೂಡ ತಾತಯ್ಯ ಭೇಟಿ ನೀಡಿದ ದಾಖಲೆಯಿದೆ. ಇದೇ ರೀತಿ ಜಿಲ್ಲಾಡಳಿತ ಭವನದ ಜಾಗದಲ್ಲಿ ತಾತಯ್ಯನವರ ದೇವಾಲಯ ಕಟ್ಟಲು ಅವಕಾಶ ನೀಡಬೇಕು ಎಂದು ಸಹ ಮನವಿ ಮಾಡಿದರು.
ಜಿಲ್ಲಾಧಿಕಾರಿಗೂ ಮನವಿ ಸಲ್ಲಿಕೆ
ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಸಹಾ ಮನವಿಪತ್ರ ನೀಡಿ, ಬಸ್ ನಿಲ್ದಾಣಕ್ಕೆ ತಾತಯ್ಯ ಹೆಸರಿಡುವುದು, ಜಿಲ್ಲಾಡಳಿತ ಭವನದ ಆವರಣದಲ್ಲಿ ಜಾಗ ನೀಡಲು ಮನವಿ ಮಾಡಿದರು. ಈ ವೇಳೆ ಬಲಿಜ ಸಂಘಟನೆಯ ಮೋಹನ್ಮುರಳಿ, ಶಿವಕುಮಾರ್,ಕೋಲಾಟ್ಲು ರಾಮಚಂದ್ರಪ್ಪ,ನಕ್ಕನಹಳ್ಳಿ ಮಂಜುನಾಥ್,ಕುಪ್ಪಹಳ್ಳಿ ರಾಜೇಂದ್ರ,ನಡುಪಲ್ಲಿ ನಾಗರಾಜ್,ಅಮರ್ನಾಥ್,ರಾಮಾನುಜಮ್,ವೇಣುಗೋಪಾಲ್,ಶಿಡ್ಲಘಟ್ಟ ಯೋಗಿನಾರೇಯಣ ತಾತಾ ಸಮಿತಿಯ ಶ್ರೀನಾಥ್, ಶಂಕರ್ ಮತ್ತಿತರರು ಇದ್ದರು.