ಸಾರ್ವಜನಿಕ ಅರ್ಜಿಗಳ ವಿಚಾರಣೆ, ಪ್ರಕರಣಗಳ ಇತ್ಯರ್ಥ
ನಗರದ ಬಸ್ ನಿಲ್ದಾಣಕ್ಕೆ ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ಗುರುವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಲ್ದಾಣದಲ್ಲಿ ಅವ್ಯವಸ್ಥೆ ಕಂಡು ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಸ್ ನಿಲ್ದಾಣದಲ್ಲಿನ ಗೂಡಂಗಡಿಗಳು, ಕ್ಯಾಂಟೀನ್ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಿದರು. ಅಂಗಡಿಗಳಲ್ಲಿ ಅವಧಿಗೆ ಮೀರಿದ ನೀರಿನ ಬಾಟಲಿ, ತಿನಿಸುಗಳ ಪ್ಯಾಕೆಟ್ಗಳನ್ನು ಮಾರಾಟ ಮಾಡುತ್ತಿರುವುದನ್ನು ಕಂಡು ಗರಂ ಆದ ಅವರು, ಬಸ್ ನಿಲ್ದಾಣದಲ್ಲಿ ಏನು ಪರಿಶೀಲನೆ ಮಾಡುತ್ತೀರಾ? ಬಸ್ ನಿಲ್ದಾಣದಲ್ಲಿ ಎಲ್ಲವೂ ಪರಿಶೀಲನೆ ಮಾಡೋಲ್ವಾ? ಎಂದು ಡಿಪೋ ಮ್ಯಾನೇಜರ್ ಮತ್ತು ನಗರಸಭೆ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು. ನೀವು ಹೊಟ್ಟೆಪಾಡಿಗೆ ತಿಂಡಿ-ತಿನಿಸುಗಳನ್ನು ಮಾರಾಟ ಮಾಡ್ತಿದ್ದೀರಿ, ಆದರೆ, ಜನರಿಗೆ ಅವಧಿಗೆ ಮೀರಿದ ತಿಂಡಿ, ತಿನಿಸು, ನೀರು ಕೊಡಬೇಡಿ ಎಂದು ಅಂಗಡಿಯವರಿಗೆ ತಾಕೀತು ಮಾಡಿದರು.ಬಸ್ ನಿಲ್ದಾಣದ ಶೌಚಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಯಾವಾಗ ಸ್ವಚ್ಛತೆ ಮಾಡ್ತೀರಿ? ಬಸ್ ನಿಲ್ದಾಣದ ಹೊರಗಡೆ ಎಲ್ಲ ಗಲೀಜು ಮಾಡ್ತಾರೆ, ಇವೆಲ್ಲಾ ಹೇಳೋಕಾಗೋಲ್ವಾ? ಸ್ವಚ್ಛತಾ ಕಾರ್ಯ ಸರಿಯಾಗಿ ಮಾಡೋಕಾಗೋಲ್ವಾ? ಎಂದು ಗದರಿದರು.
ವಿಚಾರಣೆ:
ಹಡಗಲಿ ಪುರಸಭೆ ಅಧಿಕಾರಿಗೆ ಶಹಬ್ಬಾಸ್:
ಕೂಡ್ಲಿಗಿ ತಹಸೀಲ್ದಾರ್ ನೇತ್ರಾವತಿ ಹಾಗೂ ಉಪ ನೋಂದಣಾಧಿಕಾರಿ ಸಯ್ಯದ್ ಖಾದರ್ ಅವರಿಗೆ ಮ್ಯುಟೇಶನ್ ಕುರಿತು ಬಂದ ದೂರಿನ ಬಗ್ಗೆ ಉಪ ಲೋಕಾಯುಕ್ತರು ಮಾಹಿತಿ ಕೇಳಿದರು. ಈ ಸಮಸ್ಯೆ ಬಗೆಹರಿಸಲಾಗಿದೆ ಎಂದು ನೇತ್ರಾವತಿ ದಾಖಲಾತಿಯನ್ನು ಉಪಲೋಕಾಯುಕ್ತರ ಗಮನಕ್ಕೆ ತಂದರು.
ಹೊಸಪೇಟೆ ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಉಪಲೋಕಾಯುಕ್ತರ ಭೇಟಿಯ ಮೊದಲನೇ ದಿನದಂದು ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಒಟ್ಟು 183 ಅಹವಾಲುಗಳನ್ನು ಸ್ವೀಕೃತವಾಗಿವೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ತಿಳಿಸಿದರು.ಕಾರ್ಯಕ್ರಮದ ನಂತರ ಮಾತನಾಡಿ, ಸಾರ್ವಜನಿಕರಿಂದ ಅತಿ ಹೆಚ್ಚು ಅರ್ಜಿಗಳು ಜಿಪಂಗೆ - 60 ಅರ್ಜಿಗಳು ಸ್ವೀಕೃತವಾದರೇ, ಕಂದಾಯ ಇಲಾಖೆ 40, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸಂಬಂಧಿಸಿದಂತೆ 41, ಜೆಸ್ಕಾಂ ಇಲಾಖೆ 6, ಗ್ರಾಮೀಣ ಕುಡಿಯುವ ನೀರು ಸರಬರಾಜು 5, ಆರೋಗ್ಯ ಇಲಾಖೆ 3, ಕೆಎಸ್ ಆರ್ ಟಿಸಿ 2, ಕಾರ್ಮಿಕ ಇಲಾಖೆ 3, ಪೊಲೀಸ್ ಇಲಾಖೆ 3, ಶಿಕ್ಷಣ ಇಲಾಖೆ 4, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2, ಸರ್ವೇ ಇಲಾಖೆ 2 ಸೇರಿದಂತೆ ಪಿಡಬ್ಲೂಡಿ,ಆರ್ ಟಿಒ, ವಾಣಿಜ್ಯ ತೆರಿಗೆ ಇಲಾಖೆ, ಮೊರಾರ್ಜಿ ದೇಸಾಯಿ ಶಾಲೆ, ಹೌಸಿಂಗ್ ಬೋರ್ಡ್, ನಗರ ಒಳಚರಂಡಿ, ಅಬಕಾರಿ ಇಲಾಖೆಗಳಿಗೆ ತಲಾ 1 ಅರ್ಜಿಗಳು ಸ್ವೀಕೃತಗೊಂಡಿವೆ. ಉಪಲೋಕಾಯುಕ್ತರ ಪರಿಶೀಲನೆ ಬಳಿಕ ಸ್ಥಳದಲ್ಲಿಯೇ 10 ಪ್ರಕರಣ ಇತ್ಯರ್ಥಗೊಂಡಿವೆ. ಒಂದು ತಿಂಗಳೊಳಗೆ ಸುಮಾರು 40 ಪ್ರಕರಣ ಇತ್ಯರ್ಥಗೊಳಿಸಲು ಅಧಿಕಾರಿಗಳು ಭರವಸೆ ನೀಡಿದ್ದಾರೆ. ನಿಗದಿತ ವೇಳೆಗೆ ಅಹವಾಲುಗಳಿಗೆ ಪರಿಹಾರ ಕಲ್ಪಿಸುವ ವಿಶ್ವಾಸವನ್ನು ಅಧಿಕಾರಿಗಳ ಮೇಲೆ ಇಟ್ಟಿದ್ದೇನೆ ಎಂದರು.