ಕನ್ನಡಪ್ರಭ ವಾರ್ತೆ ಭಟ್ಕಳ
ಈ ಸಂದರ್ಭ ಮಾತನಾಡಿದ ಮಂಕಾಳ ವೈದ್ಯರು, ನನಗೆ ಸಿಕ್ಕ ಗೌರವದ ಹುದ್ದೆಯಿಂದ ಎಲ್ಲರೂ ಸಂತಸ ಪಟ್ಟಿದ್ದಾರೆ. ಪಕ್ಷಬೇಧ ಮರೆತು ನನಗೆ ಹಾರೈಸಿದ್ದಾರೆ. ನಾನು ಹಿಂದಿನ ಸರಕಾರದಲ್ಲಿ ಮೀನುಗಾರಿಕಾ ಸಚಿವನಾಗಿ ಮತ್ತು ಈಗ ವಿಧಾನಸಭೆ ಉಪಸಭಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಇದೆಲ್ಲದಕ್ಕೂ ಇಡಗುಂಜಿ ಮಹಾಗಣಪತಿಯ ಆಶೀರ್ವಾದ ಮತ್ತು ಕ್ಷೇತ್ರದ ಜನರ ಪ್ರೀತಿ ವಿಶ್ವಾಸವೇ ಕಾರಣವಾಗಿದೆ ಎಂದ ಅವರು, ನನಗೆ ನನ್ನ ಜನರೇ ಶಕ್ತಿ, ನನ್ನ ಅಭಿಮಾನಿಗಳೇ ಜೀವ ಮತ್ತು ನನ್ನ ಕಾರ್ಯಕರ್ತರೇ ನನ್ನ ಬೆಂಬಲ. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಕಾಂಗ್ರೆಸ್ ಮುಖಂಡರು, ವಿವಿಧ ಸಂಘ ಸಂಸ್ಥೆ, ದೇವಸ್ಥಾನದ ಆಡಳಿತ ಮಂಡಳಿಯವರು ವಿಧಾನಸಭೆ ಉಪಸಭಾಧ್ಯಕ್ಷರನ್ನು ಸ್ವಾಗತಿಸಿ ಹೂವಿನ ಹಾರ ಹಾಕಿ ಗೌರವಿಸಿದರು.ಶ್ರೀ ಮುರುಡೇಶ್ವರನ ದರ್ಶನ ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳ ಎಸ್. ವೈದ್ಯ ಬುಧವಾರ ಶ್ರೀ ಮುರುಡೇಶ್ವರ ದೇವಸ್ಥಾನಕ್ಕೆ ತೆರಳಿ ಶ್ರೀ ಮುರುಡೇಶ್ವರನ ದರ್ಶನ ಪಡೆದರು. ಈ ಸಂದರ್ಭ ಕುಟುಂಬದವರು, ಪ್ರಮುಖರು, ಅಭಿಮಾನಿಗಳು ಇದ್ದರು.