ಹುಬ್ಬಳ್ಳಿ:ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ದೂದಸಾಗರ್ ಹಾಗೂ ಸೋನಾಲಿಯಂ ಮಧ್ಯ ಗೂಡ್ಸ್ ರೈಲು ಹಳಿ ತಪ್ಪಿದೆ. ಇದರಿಂದಾಗಿ ಕೆಲ ರೈಲುಗಳ ಸಂಚಾರವನ್ನು ರದ್ದುಪಡಿಸಿದ್ದರೆ ಕೆಲ ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ. ಸರಿಪಡಿಸುವ ಕಾರ್ಯ ಭರದಿಂದ ಸಾಗಿದೆ.
ಸಂಚಾರ ಸ್ಥಗಿತ: ಸದ್ಯ ಈ ಮಾರ್ಗದಲ್ಲಿ ಎಲ್ಲಾ ರೈಲು ಸಂಚಾರ ಸ್ಥಗಿತ ಮಾಡಲಾಗಿದೆ. ಹುಬ್ಬಳ್ಳಿ-ಲೋಂಡಾ-ಗೋವಾ ರೈಲು ಮಾರ್ಗವು ಅತ್ಯಂತ ದುರ್ಗಮ ಪ್ರದೇಶವಾಗಿದೆ. ಕಾಡು, ಕಣಿವೆಗಳಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ರೈಲು ಮಾರ್ಗ ಬಿಟ್ಟರೆ ಬೇರಾವ ಮಾರ್ಗವೂ ಇಲ್ಲಿಲ್ಲ. ಇದೀಗ ಬಿದ್ದ ರೈಲು ಬೋಗಿಗಳನ್ನು ತೆರವುಗೊಳಿಸಲು, ಕಲ್ಲಿದ್ದಲ್ಲು ಸಾಗಿಸಲು ಹೆಚ್ಚು ಸಮಯ ಹಿಡಿಯುತ್ತದೆ. ಗೋವಾದ ಗಡಿಭಾಗದಿಂದ ನಿತ್ಯ ಕರ್ನಾಟಕಕ್ಕೆ ಬರುತ್ತಿದ್ದ ರೈಲುಗಳ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿದೆ. ಈ ಮಾರ್ಗದಲ್ಲಿ ಆ. ೧೦ರಂದು ಸಂಚರಿಸಬೇಕಾದ ಕೆಲ ರೈಲುಗಳನ್ನು ರದ್ದು ಪಡಿಸಿದ್ದರೆ ಕೆಲ ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ. ಕೆಲ ರೈಲುಗಳ ಮಾರ್ಗ ಬದಲಿಸಲಾಗಿದೆ. ಟ್ರೈನ್ ಸಂಖ್ಯೆ ೧೧೦೯೭ ಪುಣೆ- ಎರ್ನಾಕುಲಂ ( ಪೂರ್ಣ ಎಕ್ಸಪ್ರೈಸ್) ಆ.೧೦ರಂದು ಪಾನ್ವೆಲ್, ಮಡಗಾಂವ ಮೂಲಕ ಸಂಚರಿಸಲಿದೆ. ಟ್ರೈನ್ ಸಂಖ್ಯೆ ೧೮೦೪೮ ವಾಸ್ಕೋಡಿ ಗಾಮಾ-ಶಾಲಿಮಾರ್ ಎಕ್ಸ್ಪ್ರೇಸ್ ರೈಲು ಆ. ೧೧ರಂದು ವಾಸ್ಕೋಡಿಗಾಮಾದಿಂದ ಹುಬ್ಬಳ್ಳಿ ಮಧ್ಯದ ಸಂಚಾರ ರದ್ದುಗೊಳಿಸಲಾಗಿದೆ. ಟ್ರೈನ್ ಸಂಖ್ಯೆ ೧೭೩೦೯ ಯಶವಂತಪುರ-ವಾಸ್ಕೋ ಡಿಗಾಮಾ ಹಾಗೂ ಟ್ರೈನ್ ಸಂಖ್ಯೆ ೧೭೩೧೦ ವಾಸ್ಕೋ ಡಿಗಾಮಾ-ಯಶವಂತಪುರ ರೈಲು ಸಂಚಾರ ರದ್ದುಪಡಿಸಲಾಗಿದೆ. ಟ್ರೈನ್ ಸಂಖ್ಯೆ ೧೨೭೭೯ ವಾಸ್ಕೋಡಿಗಾಮಾ - ಹಜರತ್ ನಿಜಾಮುದ್ದೀನ ಎಕ್ಸ್ಪ್ರೇಸ್ ರೈಲು ಆ. ೧೦ರಂದು ಮಡಗಾಂವ, ಕಲ್ಯಾಣ, ಪುಣೆ ಮಾರ್ಗವಾಗಿ ಸಂಚರಿಸಲಿದೆ.