ಕನ್ನಡಪ್ರಭ ವಾರ್ತೆ ಮೈಸೂರು
ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ತನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ವಿ. ನಾಗರಾಜ ಅವರ ಗುರುವೇ ನಿಮಗೆ ಶರಣು ಹಾಗೂ ಹಚ್ಚೇವು ಕನ್ನಡದ ದೀಪ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಯಾವುದೇ ಪಕ್ಷದ ಸರ್ಕಾರಗಳಿದ್ದರೂ ಈ ಬಗ್ಗೆ ಚಿಂತಿಸಿಲ್ಲ. ಈವರೆಗೂ ಸಮಾನ ಶಿಕ್ಷಣ ನೀತಿ ಬಂದಿಲ್ಲ. ಶಿಶುವಿಹಾರಕ್ಕೆ ಹೋಗುವವರು ಇದ್ದಾರೆ. ಎಲ್ಕೆಜಿಗೆ ಸೇರುವವರು ಇದ್ದಾರೆ. ಮೊದಲೆಲ್ಲಾ ಶಿಕ್ಷಣ ಸೇವೆಯಾಗಿತ್ತು. ಈಗ ಉದ್ಯಮವಾಗಿದೆ. ಶಿಕ್ಷಣ ತಜ್ಞರ ಜಾಗವನ್ನು ಶಿಕ್ಷಣೋದ್ಯಮಿಗಳು ಅತಿಕ್ರಮಿಸಿಕೊಂಡಿದ್ದಾರೆ. ಗುರುಗಳು ಮತ್ತು ವಿದ್ಯಾರ್ಥಿಗಳ ನಡುವೆ ಸಂಬಂಧ ಹದಗೆಡಲು ಇದು ಒಂದು ಕಾರಣ ಎಂದು ಅವರು ಹೇಳಿದರು.ಅತಿರೇಕದ ತಂತ್ರಜ್ಞಾನ ಅಳವಡಿಕೆಯಿಂದ ಶಿಕ್ಷಣದ ತತ್ವಜ್ಞಾನ ಕಡಿಮೆಯಾಗುತ್ತಿದೆ. ವಿವೇಚನೆ ಇಲ್ಲದ ತಂತ್ರಜ್ಞಾನ ಬಳಕೆ ಗುರು- ಶಿಷ್ಯರ ಸಂಬಂಧವನ್ನು ಕೆಡಿಸುತ್ತಿದೆ ಎಂದ ಅವರು, ತರಗತಿಗಳಲ್ಲಿ ಗುರು- ಶಿಷ್ಯರ ನಡುವೆ ಸಂವಾದ ನಡೆಯಬೇಕು. ಪ್ರಸ್ತುತ ಪ್ರಾಧ್ಯಾಪಕರು ಜಾಸ್ತಿಯಾಗಿದ್ದಾರೆ. ಮೇಷ್ಟ್ರುಗಳು ಕಡಿಮೆಯಾಗಿದ್ದಾರೆ ಎಂದರು.
ನೇತ್ರದಾನ ಆಂದೋಲನ ಆಗಬೇಕು
ಶಿಕ್ಷಣ ಮೂಲಶಕ್ತಿ, ಸಿನಿಮಾ ಮಾಧ್ಯಮ ಶಕ್ತಿ. ಒಂದು ಅಕ್ಷರ ಮಾಧ್ಯಮ, ಮತ್ತೊಂದು ದೃಶ್ಯ ಮಾಧ್ಯಮ. ಇವರೆರಡರ ಬಗೆಯೂ ಡಾ.ಪಿ.ವಿ. ನಾಗರಾಜ ಅವರ ಕೃತಿ ರಚಿಸಿದ್ದಾರೆ. ಗುರುಗಳನ್ನು ಸ್ಮರಿಸಿ, ಕೃತಿ ರಚಿಸಿದ್ದಾರೆ. ಇವರೊಂದು ರೀತಿಯಲ್ಲಿ ಜನಪದ ಸಾಧಕರು ಎಂದು ಅವರು ಬಣ್ಣಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಇ. ಗೋವಿಂದೇಗೌಡ ಸ್ವಾಗತಿಸಿದರು. ಸರ್ಜಾಶಂಕರ್ ಹರಳಿಮಠ ನಿರೂಪಿಸಿದರು. ಎಂ. ಮಹಾಲಿಂಗು ಮತ್ತು ತಂಡದವರು ಹಚ್ಚೇವು ಕನ್ನಡದ ದೀಪ ಗೀತೆ ಹಾಡಿದರು. ಬಿ ಸುಜಾತಾ ವಂದಿಸಿದರು.