ಮುಳಗುಂದ: ಮುಳಗುಂದದಿಂದ ಜಿಲ್ಲಾ ಕೇಂದ್ರ ಗದಗಕ್ಕೆ ಮಾರ್ಗ ಕಲ್ಪಿಸುವ ಪಾಲಾ-ಬಾದಾಮಿ ರಾಜ್ಯ ಹೆದ್ದಾರಿ ರಸ್ತೆ ನಿರಂತರ ಮಳೆಯಿಂದ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯೂದ್ದಕ್ಕು ತಗ್ಗು ಗುಂಡಿಗಳದೇ ಕಾರುಬಾರು.
ಕೈ ಕಾಲು ಮುರಿದುಕೊಂಡ ಸವಾರರು:
ರಾತ್ರಿ ಸಮಯದಲ್ಲಿ ಭಾರೀ ವಾಹನಗಳ ಲೈಟ್ನ ಬೆಳಕಿಗೆ ರಸ್ತೆ ಕಾಣದೇ ಬೈಕ್ ಸವಾರರು ತಗ್ಗು ಗುಂಡಿಗಳಲ್ಲಿ ಬಿದ್ದು ಎಷ್ಟೋ ಜನ ಕೈ ಕಾಲು ಮುರಿದು ಕೊಂಡಿದ್ದಾರೆ. ಜನ ಪ್ರತಿನಿಧಿಗಳು ಈ ರಸ್ತೆ ಮಾರ್ಗವಾಗಿ ಸಂಚರಿಸಲಿ ಆಗ ತಿಳಿಯುತ್ತೇ ಜನ ಸಮಾನ್ಯರ ಗೋಳು ಏನೂ ಎನ್ನುವುದು ಎಂದು ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು, ಪ್ರಜ್ಞಾವಂತರು ಈ ಭಾಗದ ಜನಪ್ರತಿನಿಧಿಗಳಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಕಳೆದೆರಡು ವರ್ಷಗಳ ಹಿಂದೆ ಗದಗ ನಾಗಾವಿ ಕ್ರಾಸ್ನಿಂದ ಮುಳಗುಂದ ಬಸಾಪುರ ಕ್ರಾಸ್ವರೆಗೆ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ₹ 8.40 ಕೋಟಿ ವೆಚ್ಚದಲ್ಲಿ ದುರಸ್ತಿಗೊಳಿಸಿದ ರಸ್ತೆಯೂ ಸದ್ಯ ಹರ್ತಿಯಿಂದ ನಾಗಾವಿ ಕ್ರಾಸ್ ವರೆಗೂ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಮೊಣಕಾಲುದ್ದದ ತೆಗ್ಗು ಗುಂಡಿಗಳು ನಿರ್ಮಾಣವಾಗಿವೆ.
ಮಳೆಗಾಲದಲ್ಲಿ ಮುಳಗುಂದ-ರಸ್ತೆ ಹದೆಗೆಡುವುದು ಸಾಮಾನ್ಯವಾಗಿದೆ. ಸಂಬಂಧ ಪಟ್ಟ ಇಲಾಖೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು, ಸರ್ವ ಋುತುವಿಗೂ ಬಾಳಿಕೆ ಬರುವಂತಹ ರಸ್ತೆ ನಿರ್ಮಾಣ ಮಾಡಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಬೈಕ್ ಸವಾರರಾದ ಫಕ್ಕೀರೇಶ ಕತ್ತಿ, ಬಸವರಾಜ ಪಾಟೀಲ ತಿಳಿಸಿದ್ದಾರೆ.