ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಸರಸ್ವತಿ ಪೀಠಾಧೀಶ್ವರ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಅರಕಲಗೂಡು ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಶಿವಸುಜ್ಞಾನಮೂರ್ತಿ ಸ್ವಾಮೀಜಿ ಭವನ ಉದ್ಘಾಟಿಸಿದರು.
ಬಳಿಕ ಆಶೀರ್ವಚನ ನೀಡಿದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ, ಉತ್ತಮ ಕಾರ್ಯಸಾಧನೆಗೆ ಬೇಕಾದುದು ಸಲಕರಣೆ ಅಲ್ಲ ಸಂಕಲ್ಪ. ತಾನೊಬ್ಬ ಶಿಕ್ಷಕ, ಅರ್ಚಕ ತನ್ನಿಂದೇನಾದೀತೆಂಬ ಭಾವ ತೊರೆದು ಎಲ್ಲವೂ ಸಾಧ್ಯ ಎಂಬ ಸಂಕಲ್ಪ ತೊಟ್ಟ ಜಯಕರ ಆಚಾರ್ಯ, ಸುಂದರ ವಿನ್ಯಾಸ ನೀಡಿದ ಸುಂದರ ಆಚಾರ್ಯ, ವೇದಿಕೆ ಪ್ರಾಯೋಜಿಸಿ ಆನಂದವಿತ್ತ ಆನಂದ ಆಚಾರ್ಯ, ದಾನಿಗಳೆಲ್ಲರಿಂದಾಗಿ ಈ ಭವನ ಸುಂದರವಾಗಿ ನಿರ್ಮಾಣವಾಗಿದೆ ಎಂದರು.ಶಿವ ಸುಜ್ಞಾನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಗುರು ಮತ್ತು ದೇವರ ಮೇಲೆ ಶ್ರದ್ಧಾಭಕ್ತಿ ಇರಿಸಿಕೊಂಡಾಗ ಎಲ್ಲ ಕಾರ್ಯವೂ ಹೂವೆತ್ತಿದಂತೆ ಆಗುತ್ತದೆ ಎಂದರು.
ದೇವಳದ ಆಡಳಿತ ಮೊಕ್ತೇಸರ ಪುರೋಹಿತ ಎನ್.ಜಯಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕಾಳಿಕಾಂಬಾ ದೇಗುಲಗಳ ಮುಖ್ಯಸ್ಥರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಕೆ. ಪ್ರಭಾಕರ ಆಚಾರ್ಯ ಮಧೂರು, ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಉಮೇಶ ಆಚಾರ್ಯ ಮಂಗಳೂರು, ಸಿಎ ಶ್ರೀಧರ ಆಚಾರ್ಯ, ಪನ್ವೇಲ್, ಮುರಹರಿ ಆಚಾರ್ಯ ಕಟಪಾಡಿ, ಕ್ಷೇತ್ರದ ಮೊಕ್ತೇಸರ ಎಂ.ಕೆ. ಬಾಲಕೃಷ್ಣ ಆಚಾರ್ಯ. ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ್ ಆಚಾರ್ಯ, ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಎಸ್. ಆಚಾರ್ಯ, ಸಭಾಭವನ ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಸತೀಶ್ ಅಚಾರ್ಯ ಕಡಂದಲೆ, ಜತೆ ಕಾರ್ಯದರ್ಶಿಗಳಾದ ಶಿವರಾಮ ಆಚಾರ್ಯ, ಅರವಿಂದ ವೈ. ಆಚಾರ್ಯ, ಮಹೇಶ್ ಎನ್. ಗಂಟಾಲ್ಕಟ್ಟೆ ಇದ್ದರು.
ಕ್ಷೇತ್ರದ ಮೊಕ್ತೇಸರ ಉಳಿಯ ಶಿವರಾಮ ಆಚಾರ್ಯ ಸ್ವಾಗತಿಸಿದರು. ಧನಂಜಯ ಮೂಡುಬಿದಿರೆ, ಬೆಳುವಾಯಿ ಸೀತಾರಾಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಯಮುನಾ ಯೋಗೀಶ್ ಆಚಾರ್ಯ ಸನ್ಮಾನಿತರನ್ನು ಪರಿಚಯಿಸಿದರು. ಬಳಿಕ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾಸಂಘದ ಸಂಯೋಜನೆಯಲ್ಲಿ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ ನಡೆಯಿತು.