ದೇವಾಟ್‌ಪರಂಬ್: ಸಿಎನ್‌ಸಿಯಿಂದ ಹಿರಿಯರಿಗೆ ಗೌರವ

KannadaprabhaNewsNetwork |  
Published : Mar 25, 2025, 12:50 AM IST
ಚಿತ್ರ : 24ಎಂಡಿಕೆ1 : ದೇವಾಟ್‌ಪರಂಬ್ ಸಿಎನ್ ಸಿಯಿಂದ ಹಿರಿಯರಿಗೆ ಗೌರವಾಂಜಲಿ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಕೊಡವ ನ್ಯಾಷನಲ್ ಕೌನ್ಸಿಲ್‌ನಿಂದ ಕೊಡವರ ನರಮೇಧ ನಡೆದ ದೇವಾಟ್‌ಪರಂಬ್‌ನಲ್ಲಿ ಹಿರಿಯರಿಗೆ ಗೌರವಾಂಜಲಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ನ್ಯಾಷನಲ್ ಕೌನ್ಸಿಲ್‌ನಿಂದ ಕೊಡವರ ನರಮೇಧ ನಡೆದ ದೇವಾಟ್‌ಪರಂಬ್‌ನಲ್ಲಿ ಹಿರಿಯರಿಗೆ ಗೌರವಾಂಜಲಿ ಸಲ್ಲಿಸಲಾಯಿತು.

ಎನ್.ಯು.ನಾಚಪ್ಪ ದುರಂತ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಿ, ಸಿಎನ್‌ಸಿ ನಿರಂತರವಾಗಿ ಕೊಡವಲ್ಯಾಂಡ್‌, ಭೌಗೋಳಿಕ-ರಾಜಕೀಯ ಪ್ರಾದೇಶಿಕ ಸ್ವಾಯತ್ತತೆ, ಸ್ವ-ಆಡಳಿತ ಮತ್ತು ಆಂತರಿಕ ಸ್ವ-ನಿರ್ಣಯದ ಹಕ್ಕುಗಳನ್ನು ಬಯಸುತ್ತಿದೆ. ಕೊಡವರಿಗಾಗಿ ಎಸ್‌ಟಿ ಟ್ಯಾಗ್, ಕೊಡವ ಹಕ್ಕುಗಳನ್ನು ರಕ್ಷಿಸಲು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಪ್ರತಿಪಾದಿಸುವುದು ಸೇರಿದಂತೆ ಹಲವು ಬೇಡಿಕೆ ಇಟ್ಟುಕೊಂಡು ಹೋರಾಡುತ್ತಿದೆ ಎಂದರು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರೇಖಾ ನಾಚಪ್ಪ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಮಂದಪಂಡ ಮನೋಜ್, ನಂದೇಟಿರ ರವಿ ಸುಬ್ಬಯ್ಯ, ಮಂದಪಂಡ ಸೂರಜ್, ಪಟ್ಟಮಾಡ ಅಶೋಕ್, ಸಾದೇರ ರಮೇಶ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!