ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ನಾಯಕತ್ವದ ಗುಣ ಬೆಳೆಸಿಕೊಂಡು ಮುನ್ನಡೆಯಿರಿ: ಅನ್‌ಬಲಗನ್

KannadaprabhaNewsNetwork | Published : Mar 4, 2024 1:17 AM

ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಗುರಿಯ ಕಡೆಗೆ ಜನರನ್ನು ಕರೆದುಕೊಂಡು ಹೋಗಲು ಒಳ್ಳೆಯ ನಾಯಕರ ಅವಶ್ಯಕತೆ ಇದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಗುರಿಯ ಕಡೆಗೆ ಜನರನ್ನು ಕರೆದುಕೊಂಡು ಹೋಗಲು ಒಳ್ಳೆಯ ನಾಯಕರ ಅವಶ್ಯಕತೆ ಇದೆ. ಆ ನಾಯಕತ್ವದ ಗುಣಗಳನ್ನು ಎಲ್ಲರೂ ಕಲಿತು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಅಂತಾರಾಷ್ಟ್ರೀಯ ಸಂಸ್ಥೆಯಾದ ಜೆಸಿಐನ ಹಿರಿಯರ ವಿಭಾಗದ ಜೆಎಸಿ ರಾಷ್ಟ್ರೀಯ ಅಧ್ಯಕ್ಷ ತಮಿಳುನಾಡಿನ ಅನ್‌ಬಲಗನ್ ನುಡಿದರು.

ನಗರದ ಅಶೋಕ ಹೋಟೆಲ್‌ನಲ್ಲಿ ಈಚೆಗೆ ನಡೆದ ಜೆಎಸಿಯ ಹಿರಿಯ ವಿಭಾಗದ ವಲಯ ೨೪ರ ನೂತನ ಚೇರಮನ್ ಆಗಿ ಆಯ್ಕೆಯಾದ ಹಾವೇರಿಯ ರುಸ್ತುಂ ನಂದಿಹಳ್ಳಿಯವರಿಗೆ ಪ್ರಮಾಣ ವಚನ ಬೋಧನೆ ಮಾಡಿ ಮಾತನಾಡಿದ ಅವರು, ಜೇಸಿ ಸಂಸ್ಥೆ ಸಾಮಾಜಿಕ ಸೇವೆಯ ಉದ್ದೇಶ ಹೊಂದಿದೆ. ಇದರ ಧ್ಯೇಯೋದ್ದೇಶಗಳ ಈಡೇರಿಕೆಗೆ ಪ್ರತಿ ಸದಸ್ಯರೂ ಬದ್ಧತೆ ತೋರುವಂತೆ ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿದ್ದ ರಾಷ್ಟ್ರೀಯ ಉಪಾಧ್ಯಕ್ಷ ಕುಮಾರ ಕೊಡಕಳ್ಳಿ ಮಾತನಾಡಿ, ದೇಶ ಸೇವೆಯೇ ಈಶ ಸೇವೆ ಎಂಬ ಮನೋಭಾವವನ್ನು ನಾವೆಲ್ಲರೂ ಅಳವಡಿಸಿಕೊಂಡು ಮುಂದೆ ಸಾಗಬೇಕಾಗಿದೆ ಎಂದರು. ಜೆಸಿ ಸಂಸ್ಥೆಯ ವಲಯ ಅಧ್ಯಕ್ಷ ಚೆನ್ನವಿರೇಶ ಮಾತನಾಡಿ, ವ್ಯಕ್ತಿ ಸಮಾಜದಲ್ಲಿ ಬದುಕಿದಾಗ ಎಲ್ಲರಿಂದಲೂ ಒಂದೊಂದು ವಿಶೇಷ ಗುಣಗಳನ್ನು ಕಲಿತು ಉತ್ತಮ ನಾಗರಿಕನಾಗಿ ಬದುಕಲು ಸಾಧ್ಯ. ಆದ್ದರಿಂದ ಸಮಾಜದಲ್ಲಿ ಎಲ್ಲರೊಂದಿಗೂ ಬೆರೆತು ಬದುಕುವ ಗುಣ ಕಲಿಯಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರುಸ್ತುಂ ನಂದಿಹಳ್ಳಿ ಮಾತನಾಡಿದರು.

ಹಿರಿಯ ಸದಸ್ಯರಾದ ಅಲಕನಂದ, ರಂಗಸ್ವಾಮಿ, ಬಿ.ಎಸ್. ಸುರೇಶ್, ಪ್ರದೀಪ್ ಕೆ.ಆರ್., ಚಂದ್ರಾಮಪ್ಪ, ವಲಯ ಮಂಡಳಿಯ ಉಪಾಧ್ಯಕ್ಷ ಮುನಿವಾಸುದೇವ ರೆಡ್ಡಿ, ಪ್ರಿಯಾ ಪಿಳೈ, ಪ್ರಭುಲಿಂಗಪ್ಪ ಹಲಗೇರಿ, ಸುರೇಂದ್ರ ಕೆ., ಮಹಾಬಲೇಶ್ವರ, ವಲಯ ಕಾರ್ಯದರ್ಶಿ ಆರ್.ವಿ. ಪಾಟೀಲ, ಕಾರ್ಯಕ್ರಮ ನಿರ್ದೇಶಕ ಎನ್. ಜೆ. ಹಿರೇಮಠ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ, ಎಸ್.ಆರ್. ಹಿರೇಮಠ, ಎಸ್.ಬಿ. ದೊಡ್ಡಮನಿ, ಸುರೇಶ್ ಕಡಕೋಳ, ಜಗದೀಶ್ ಚೌಟಗಿ, ನಾಗರಾಜ ನಡುವಿನಮಠ, ನಿರ್ಮಲಾ ಚೌಟಗಿ, ಹಸಿನಾ ನಂದಿಹಳ್ಳಿ, ಲಕ್ಷ್ಮೀ ಕೆ., ಹಾವೇರಿ ಘಟಕದ ಅಧ್ಯಕ್ಷ ಶಿವಾನಂದ ಕುಂಕದ, ವಿರುಪಾಕ್ಷ ಹಾಲಪ್ಪನವರ, ಕಿರಣ ಅರಳಿಕಟ್ಟಿ ಇತರರಿದ್ದರು.