ಕನ್ನಡಪ್ರಭ ವಾರ್ತೆ, ಬೆಂಗಳೂರು
ಗುರುವಾರ ದಲಿತ ಸಾಹಿತ್ಯ ಪರಿಷತ್ತು ಮಲ್ಲೇಶ್ವರದಲ್ಲಿರುವ ಗಾಂಧಿ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಕಾರ್ಮಿಕರ ಹಿತರಕ್ಷಣೆಯಲ್ಲಿ ಬಾಬಾ ಸಾಹೇಬರ ಪಾತ್ರ’ ಕುರಿತ ಚಿಂತನಾಗೋಷ್ಠಿ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಬಾಬಾ ಸಾಹೇಬರ ವಿಚಾರಗಳು ದಲಿತ ಕೇರಿ, ಹಿಂದುಳಿದ ವರ್ಗಗಳಿಗೆ ಮಾತ್ರ ಸೀಮಿತವಾಗದೆ ದೇಶದಲ್ಲಿರುವ ಪ್ರತಿ ಮನೆ ಮನೆಗೂ ಮುಟ್ಟಿಸಬೇಕು. ಭಾರತ ಕೃಷಿ ಪ್ರಧಾನ ರಾಷ್ಟ್ರ. ರೈತರು ದೇಶದ ಬೆನ್ನೆಲುಬು. ಆದರೆ ಕಾರ್ಮಿಕರು ಹೃದಯವಿದ್ದಂತೆ. ಹೃದಯ ಕೆಲಸ ನಿಲ್ಲಿಸಿತ್ತೆಂದರೆ ದೇಹದ ಎಲ್ಲ ಕೆಲಸಗಳು ನಿಲ್ಲುತ್ತವೆ. ಹಾಗೆಯೇ ಕಾರ್ಮಿಕರು ಕೆಲಸ ನಿಲ್ಲಿಸಿದರೆ, ರಾಜ್ಯ, ರಾಷ್ಟ್ರ ಅಧೋಗತಿಯತ್ತ ಸಾಗುತ್ತದೆ. ರೈತರಷ್ಟೇ ಕಾರ್ಮಿಕರು ಇಲ್ಲಿ ಮುಖ್ಯ ಎಂದರು.ದೇಶ ಇಷ್ಟೊಂದು ಮುಂದುವರೆಯಲು ಅಂಬೇಡ್ಕರ್ ನೀಡಿದ ಸಂವಿಧಾನದ ಮೂಲಕ ಕೊಟ್ಟಂತ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ವಿಚಾರಗಳು ಕಾರಣ. ಕಾರ್ಮಿಕರು ಈ ಹಿಂದೆ 12ರಿಂದ 15 ಗಂಟೆ ಕೆಲಸ ಮಾಡುತ್ತಿದ್ದರು. ಆದರೆ, ಕಾರ್ಮಿಕರಿಗೂ ಬದುಕಿದೆ. ಅವರ ಆರೋಗ್ಯ ಸ್ಥಿರತೆಗೆ ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡಬೇಕೆಂಬ ಕಾನೂನು ಜಾರಿಗೊಳಿಸುವಲ್ಲಿಯೂ ಅಂಬೇಡ್ಕರ್ ಕೊಡುಗೆ ಅಪಾರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡ ಡಾ। ಕೆ.ಪ್ರಕಾಶ್, ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗೌಡಗೆರೆ ಮಾಯುಶ್ರೀ, ಮಹಿಳಾ ಹೋರಾಟಗಾರ್ತಿ ಟಿ.ಎಚ್.ಯಶೋಧ ಇದ್ದರು.