ಕನ್ನಡಪ್ರಭ ವಾರ್ತೆ ಶಹಾಪುರ
ನಗರದ ಎನ್ಜಿಒ ಕಾಲೊನಿಯಲ್ಲಿ ನಡೆದ ಸಿಂಪಿ ಸಮುದಾಯದ ಆರಾಧ್ಯ ದೈವಿಪುರಷ ಜಡೆಶಂಕರಲಿಂಗ ದೇವಸ್ಥಾನದ ಕಟ್ಟಡ ಹಾಗೂ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಜಾತೀಯತೆ, ಅಸಮಾನತೆ, ಶೋಷಣೆ ಇತ್ಯಾದಿ ತಾಂಡವಾಡುತ್ತಿದ್ದ 12ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ತತ್ವ, ಚಿಂತನೆಗಳ ಮೂಲಕ ಎಲ್ಲವನ್ನು ತೊಡೆದು ಹಾಕಿ ಜಾತ್ಯಾತೀತತೆ, ಸಮಾನತೆ ಸ್ಥಾಪಿಸಿದರು. ಅದರಂತೆ ಸಿಂಪಿ ಸಮುದಾಯ ಚಿಕ್ಕದಾಗಿದ್ದರೂ ಭಕ್ತಿಗೆ ಪ್ರಾಧಾನ್ಯತೆ ನೀಡಿ ಸಮುದಾಯವಾಗಿದೆ. ಸಮುದಾಯ ಭವನಕ್ಕಾಗಿ 10 ಲಕ್ಷ ರು. ಗಳ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಮುಖ್ಯಗುರು ನಿಂಗಣ್ಣ ಸಿಂಪಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯವಾಗಿದ್ದರೂ ಜಡೇಶಂಕರಲಿಂಗ ದೇವಸ್ಥಾನ ಮತ್ತು ಸಮುದಾಯ ಭವನಕ್ಕಾಗಿ ಸಚಿವ ದರ್ಶನಾಪುರ ಅವರ ಕೊಡುಗೆ ಸ್ಮರಣೀಯವಾಗಿದೆ. ಸಮುದಾಯ ಭವನಕ್ಕಾಗಿ 10 ಲಕ್ಷ ರು. ಗಳು ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದ್ದು ಸಂತಸ ತಂದಿದೆ. ಸಮುದಾಯದ ಮುಖಂಡರು ಒಟ್ಟಾಗಿ ದೇವಸ್ಥಾನ ಮತ್ತು ಸಮುದಾಯ ಭವನ ನಿರ್ಮಾಣಕ್ಕಾಗಿ ಕೈಜೋಡಿಸೋಣ ಎಂದರು.
ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಮಲ್ಲಣ್ಣ ಸಾಹು ಮಡ್ಡಿ, ಉಪಾಧ್ಯಕ್ಷ ಚಂದ್ರಶೇಖರ ಸಾಹು ಆರಬೋಳ, ಶರಣು ಗಟ್ಟಿನ್, ಸಿಂಪಿ ಸಮಾಜದ ಜಿಲ್ಲಾಧ್ಯಕ್ಷ ಚೆನ್ನಪ್ಪ ಗಿಂಡಿ, ತಾಲೂಕಾಧ್ಯಕ್ಷ ನಟರಾಜ್ ಗಟ್ಟಿನ್, ಗಿರೆಪ್ಪ ಪಾಟೀಲ್ ವೇದಿಕೆಯಲ್ಲಿದ್ದರು. ಪ್ರಮೋದ ಶಾಬಾದಿ ಸ್ವಾಗತಿಸಿದರು. ಶ್ರೀರಕ್ಷಾ ಗಿಂಡಿ ಸಂಗಡಿಗರು ಭರತನಾಟ್ಯದೊಂದಿಗೆ ಪ್ರಾರ್ಥಿಸಿದರು. ಗೀತಾ ಗಿಂಡಿ ವಂದಿಸಿದರು.