ಹುಬ್ಬಳ್ಳಿ:
ನಗರದ ಹು-ಧಾ ಸೆಂಟ್ರಲ್ ಕ್ಷೇತ್ರದ 42ನೇ ವಾರ್ಡಿನಲ್ಲಿ ಅಂದಾಜು ₹1 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರದಿಂದ ಅನುದಾನದ ಕೊರತೆ ಇದ್ದು, ಅಂತಹ ಪರಿಸ್ಥಿತಿಯಲ್ಲಿಯೂ ಕ್ಷೇತ್ರದಲ್ಲಿ ಜನಪರ ಅಭಿವೃದ್ಧಿ ಕಾಮಗಾರಿ ನಡೆಸುತ್ತಾ ಮುಂದೆ ಸಾಗುತ್ತಿದ್ದೇನೆ. ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯವಾಗಿದ್ದು, ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದನ್ನು ನಿಲ್ಲಿಸುವುದಿಲ್ಲ ಎಂದರು.ಈ ವೇಳೆ ರಾಜಾಜಿನಗರ ರಿಕ್ಷಾ ನಿಲ್ದಾಣದಿಂದ ಮಂಜುನಾಥ ಉಡುಪಿ ಮನೆಯ ವರೆಗೆ ₹29 ಲಕ್ಷದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ, ಹೂಗಾರ ಓಣಿಯ ಅರಳಿಕಟ್ಟಿ ಮನೆಯ ವರೆಗೆ ₹12 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ, ₹12 ಲಕ್ಷ ವೆಚ್ಚದಲ್ಲಿ ಓಂಕಾರ ಅಂಗಡಿಯಿಂದ ರಾಯನಗೌಡರ ಮನೆಯ ವರೆಗೆ ಕಾಂಕ್ರಿಟ್ ರಸ್ತೆ, ₹9 ಲಕ್ಷ ವೆಚ್ಚದಲ್ಲಿ ಸಿದ್ದರಾಮನಗರ ಡೊಂಬರ ಮನೆಯ ದೇವಸ್ಥಾನ ವರೆಗಿನ ರಸ್ತೆ ಕಾಮಗಾರಿ, ₹ 12 ಲಕ್ಷ ವೆಚ್ಚದಲ್ಲಿ ಅಜಾದ್ ಸೊಸೈಟಿಯಿಂದ ಫಯಾಜ ಮನೆಯ ವರೆಗೆ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಪಾಲಿಕೆ ಸದಸ್ಯ ಎಂ.ವೈ. ನರಗುಂದ, ರಾಜು ಕಾಳೆ, ಪ್ರಫುಲ್ ಚಂದ ರಾಯನಗೌಡ, ರಮೇಶ ಮಹಾದೇವಪ್ಪನವರ, ಈಶ್ವರಗೌಡ ಪಾಟೀಲ, ಅಶೋಕ ವಾಲ್ಮೀಕಿ, ಮಂಜುನಾಥ ಉಡುಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.