ಕನ್ನಂಬಾಡಿ ಕಟ್ಟೆ ರೀತಿ ಸೂಳೆಕೆರೆ ಅಭಿವೃದ್ಧಿ: ಕೆ.ಎಂ.ಉದಯ್

KannadaprabhaNewsNetwork |  
Published : Sep 06, 2026, 02:00 AM IST
5ಕೆಎಂಎನ್ ಡಿ17 | Kannada Prabha

ಸಾರಾಂಶ

ರೈತರು ತಾಳ್ಮೆಯಿಂದ ಇದ್ದರೇ ಸಂಪೂರ್ಣವಾಗಿ ಕೊನೆ ಭಾಗದ ರೈತರ ನೀರಿನ ಬವಣೆಗೆ ಮುಕ್ತಿ ನೀಡುತ್ತೇನೆ. ನಾಲೆಗಳ ಕೆಲಸ ಶೇ.90ರಷ್ಟು ಭಾಗ ಮುಗಿದಿದೆ. ಅಲ್ಲಲ್ಲಿ ಸಣ್ಣ ಬ್ರಿಡ್ಜ್, ಡಕ್ಕುಗಳ ಕೆಲಸ ಬಾಕಿ ಇದೆ. ಕೆಲ ರೈತರು ಅಲ್ಲಲ್ಲಿ ಪೈಪ್ ಗಳನ್ನೇ ಹಾಕಿಕೊಂಡರೇ ಕೊನೆ ಭಾಗದ ರೈತರಿಗೆ ತೊಂದರೆಯಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸೂಳೆಕೆರೆ ಅಭಿವೃದ್ಧಿ ಕಾಮಗಾರಿಯನ್ನು ಸಹಿಸದೇ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ರೈತರು ಇದಕ್ಕೆ ಆಸ್ಪದ ನೀಡಬಾರದು. ಮುಂದಿನ ದಿನಗಳಲ್ಲಿ ಸೂಳೆಕೆರೆ ಮಿನಿ ಕನ್ನಂಬಾಡಿ ಕಟ್ಟೆ ರೀತಿ ಮಾಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.

ಕ್ಯಾತಘಟ್ಟ ಗ್ರಾಮದಲ್ಲಿ ಏತ ನೀರಾವರಿ ಯೋಜನೆಯ ಚೆಕ್ ಡ್ಯಾಂ, ಹೊಸಕಟ್ಟಡ, ಪಂಪ್ ಮೋಟರ್ ರೈಸಿಂಗ್ ಮೆನು ಸೇರಿದಂತೆ ವಿವಿಧ ಅಭಿವೃದ್ಧಿಗಳಿಗೆ ಚಾಲನೆ ನೀಡಿ ಮಾತನಾಡಿ, ಸೂಳೆಕೆರೆ ಕಾಮಗಾರಿ ಅಭಿವೃದ್ಧಿ ಇನ್ನು ಮುಗಿದಿಲ್ಲ. ಪ್ರಸ್ತುತ ಶೇ.40ರಷ್ಟು ಮಾತ್ರ ಕಾಮಗಾರಿ ಮುಗಿದಿದೆ. ಇನ್ನು ಉಳಿದ ಕಾಮಗಾರಿ ಮುಗಿಯುವ ಮುನ್ನವೇ ಅಪಪ್ರಚಾರ ನಡೆಸುತಿದ್ದಾರೆ ಎಂದು ಕಿಡಿಕಾರಿದರು.

ಒಂದು ವರ್ಷದ ಅವಧಿಯಲ್ಲಿ ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿ ಕ್ಷೇತ್ರದ ನೀರಿನ ಬವಣೆಯಿಂದ ದೂರ ಮಾಡುವುದು ನನ್ನ ಗುರಿ. ತಾಲೂಕಿನ ಜೀವನಾಡಿ ಸೂಳೆಕೆರೆಯನ್ನು ಮಿನಿ ಕೆಆರ್‌ಎಸ್ ರೀತಿ ಮಾಡಲು ನಿಮ್ಮ ಸಹಕಾರ ಅಗತ್ಯ ಎಂದರು.

ರೈತರು ತಾಳ್ಮೆಯಿಂದ ಇದ್ದರೇ ಸಂಪೂರ್ಣವಾಗಿ ಕೊನೆ ಭಾಗದ ರೈತರ ನೀರಿನ ಬವಣೆಗೆ ಮುಕ್ತಿ ನೀಡುತ್ತೇನೆ. ನಾಲೆಗಳ ಕೆಲಸ ಶೇ.90ರಷ್ಟು ಭಾಗ ಮುಗಿದಿದೆ. ಅಲ್ಲಲ್ಲಿ ಸಣ್ಣ ಬ್ರಿಡ್ಜ್, ಡಕ್ಕುಗಳ ಕೆಲಸ ಬಾಕಿ ಇದೆ. ಕೆಲ ರೈತರು ಅಲ್ಲಲ್ಲಿ ಪೈಪ್ ಗಳನ್ನೇ ಹಾಕಿಕೊಂಡರೇ ಕೊನೆ ಭಾಗದ ರೈತರಿಗೆ ತೊಂದರೆಯಾಗುತ್ತದೆ. ಅಂತಿಮ ಹಂತದಲ್ಲಿ ಕೊನೆ ಭಾಗದ ರೈತರಿಗೂ ಸರಾಗವಾಗಿ ನೀರು ಒದಗಿಸುವುದೇ ನನ್ನ ಗುರಿ ಎಂದರು.

ಕೆರೆ ಕಟ್ಟೆಗಳನ್ನು ತುಂಬಿಸಿ ಬೋರ್ ವೆಲ್ ಗಳಲ್ಲಿ ಅಂತರ್ಜಲ ಹೆಚ್ಚಿಸಬೇಕು. ನೀರಿಗೋಸ್ಕರ ಕಿತ್ತಾಡುವುದು ಪ್ರತಿಭಟನೆ ಮಾಡುವುದು ಮುಂದಿನ ದಿನಗಳಲ್ಲಿ ಸಂಪೂರ್ಣ ನಿಲ್ಲಿಸುವುದು ನನ್ನ ಉದ್ದೇಶ. ಚಿಕ್ಕರಸಿನಕೆರೆ ಹೋಬಳಿ ರೈತರ ನೀರಿನ ಬವಣೆ ನೀಗಿಸಲು ಕ್ರಮ ವಹಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು, ಬ್ಲಾಕ್ ಯೂತ್ ಕಾಂಗ್ರೆಸ್ ಅದ್ಯಕ್ಷ ವೆಂಕಟೇಶ್, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಗಿರೀಶ್ ಕ್ಯಾತಘಟ್ಟ, ಕೃಷ್ಣ, ವಿಜಯ್ ಕುಮಾರ್, ಜಯರಾಂ, ತೊರೆಚಾಕನಹಳ್ಳಿ ಶಂಕರೇಗೌಡ, ಪೂಜಾರಿ ಮಹೇಶ್ ಅಜ್ಜಹಳ್ಳಿ ಮನು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಾದ ನಾಗರಾಜು, ಬಾಬು ಕೃಷ್ಣದೇವ್, ಪ್ರಶಾಂತ್ ಲಿಂಗಯ್ಯ, ಅವಿನಾಶ್ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಟ್ಸಾಪ್‌ ಕರೆಯಲ್ಲೇ ಕನ್ನಾಳೆ ಗ್ಯಾಂಗ್‌ ಕೆಪಿಎಸ್ಸಿ ಡೀಲ್‌!
ಇಂದಿರಾ ಕಿಟ್‌ ಯೋಜನೆಗೆ ಬೆಲೆ ಏರಿಕೆಯ ಏಟು