ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಕೆಂಭಾವಿ ಪಟ್ಟಣ ಸಮೀಪದ ಮುದನೂರ ಗ್ರಾಮದ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ನಡೆದ ಶಿವಪೂಜೆ ಹಾಗೂ ಪಾದಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಂಠಿ ನೀ ಗ್ಯಾರಂಟಿ ಎನ್ನುವಂತೆ ಪೂಜ್ಯರು ಆಶೀರ್ವದಿಸಿದ ಎಲ್ಲ ಕೆಲಸಗಳು ಯಾವುದೇ ತೊಂದರೆಯಿಲ್ಲದೆ ಸುಗಮವಾಗಿ ಜರಗುತ್ತವೆ. ಅದಕ್ಕೆ ಅನೇಕ ಭಕ್ತರ ಜೀವನದಲ್ಲಿ ನಡೆದ ದೃಷ್ಟಾಂತಗಳೆ ಸಾಕ್ಷಿಯಾಗಿವೆ. ಶಿವರಾತ್ರಿ ಮಹಾದಿನದಂದು ಪೂಜ್ಯರ ಆಶೀರ್ವಾದ ದೊರಕಿರುವುದು ಮಹಾಪುಣ್ಯ ಎಂದರು.ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ಸಿ. ಪಾಟೀಲ್ ಮಾತನಾಡಿ, ಅಧಿಕಾರ ಶಾಶ್ವತವಲ್ಲ, ನಾವು ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳು ಶಾಶ್ವತವಾಗಿರುತ್ತವೆ. ಶ್ರೀಮಠದ ಪೂಜ್ಯರ ಆಶೀರ್ವಾದದಿಂದ ಅನೇಕ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಪೂಜ್ಯರ ಶ್ರೀರಕ್ಷೆ ನಾಡಿನ ಎಲ್ಲ ಜನರ ಮೇಲಿರಲಿ ಎಂದು ಆಶಿಸಿದರು.
ಮುಖಂಡ ರುದ್ರಣ್ಣ ಮರಕಟ್, ಪಿಎಸ್ಐ ರಾಜಶೇಖರ ರಾಠೋಡ, ಚೆನ್ನಯ್ಯಸ್ವಾಮಿ ಹಿರೇಮಠ, ಬಸನಗೌಡ ಮಾಲಿಪಾಟೀಲ್, ಮಹಾಂತಯ್ಯಸ್ವಾಮಿ ಸುರಗಿಮಠ, ಶಿವರಾಜ ಖಾನಗೌಡರ, ಹರೀಶ ಕಳಾಂಕರ, ಪ್ರಾಶುಂಪಾಲೆ ಸುಮಂಗಲಾ ಶಿವನಗೌಡ ಬೆನಾಳ, ಹಣಮಂತ್ರಾಯ ಮರಕಟ್, ಸುಬ್ಬರಾಯ ಕಾಚಾಪುರ, ಗೌಡಪ್ಪಗೌಡ ರಸ್ತಾಪುರ, ಹಣಮಂತ್ರಾಯ ರಸ್ತಾಪುರ, ಮಲ್ಲಯ್ಯಸ್ವಾಮಿ ಡೊಣುರಮಠ, ಪ್ರಕಾಶ ಆರವಾಡಿ, ಬಾಜರಾವ ಆರೆವಾಡಿ ಸೇರಿದಂತೆ ಅನೇಕ ಭಕ್ತಾಧಿಗಳಿದ್ದರು.