ತಾಳಿಕೋಟೆ: ಪಟ್ಟಣದ ಖಾಸ್ಗತೇಶ್ವರ ಜಾತ್ರೋತ್ಸವ ಪ್ರಯುಕ್ತ ವಿಶೇಷ ಪ್ರಸಾದ ಮಾಡಲಾಗಿತ್ತು. ಭಾನುವಾರ ಭಕ್ತರಿಗಾಗಿ ಪಾನಿಪುರಿ, ಸಿರಾ, ಖಡಕ್ ರೊಟ್ಟಿ ಅನ್ನ ಸಾಂಬಾರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ತಾಳಿಕೋಟೆ: ಪಟ್ಟಣದ ಖಾಸ್ಗತೇಶ್ವರ ಜಾತ್ರೋತ್ಸವ ಪ್ರಯುಕ್ತ ವಿಶೇಷ ಪ್ರಸಾದ ಮಾಡಲಾಗಿತ್ತು. ಭಾನುವಾರ ಭಕ್ತರಿಗಾಗಿ ಪಾನಿಪುರಿ, ಸಿರಾ, ಖಡಕ್ ರೊಟ್ಟಿ ಅನ್ನ ಸಾಂಬಾರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸುಮಾರು ೯ ದಿನಗಳ ಕಾಲ ಜರುಗಲಿರುವ ಈ ಜಾತ್ರೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಶ್ರೀಮಠದಿಂದ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. ೫೦ ಸಾವಿರ ಹೂರಣದ ಹೋಳಿಗೆಯನ್ನು ಪ್ರಸಾದ ಮಾಡಲಾಗಿತ್ತು. ೧ ಲಕ್ಷ ಜಿಲೇಬಿ ತಯಾರಿಸಿ ಭಕ್ತಾಧಿಗಳಿಗೆ ನೀಡಲಾಗಿತ್ತು. ಈ ಬಾರಿ ೧ ಲಕ್ಷ ಪಾನಿಪುರಿ ತಯಾರಿಸುವುದರೊಂದಿಗೆ ಭಕ್ತರ ಅಪೇಕ್ಷೆಯಂತೆ ೧ ಲಕ್ಷ ಪಾನಪುರಿ ತಯಾರಿಸಿ ಭಕ್ತಾಧಿಗಳಿಗೆ ಸಿದ್ದಲಿಂಗಶ್ರೀಗಳು ಉಣಬಡಿಸಿದರು.
ಜೊತೆಗೆ ಜಾತ್ರೋತ್ಸವದಲ್ಲಿ ಸಜ್ಜಕ, ತುಪ್ಪ, ಗೋದಿ ಹುಗ್ಗಿ, ಅನ್ನ ಸಾಂಬಾರು, ಸಿರಾ, ಬೋಂದಿ ಜೋಳದ ಹಾಗೂ ಸಜ್ಜಿ ರೊಟ್ಟಿ ವಿವಿಧ ತರಹದ ಪಲ್ಲೆ ವಿವಿಧ ಬಗೆಯ ಫಕ್ವಾನ ಭೋಜನ ವ್ಯವಸ್ಥೆ ನಡೆಯಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.