ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಮಿರ್ಚಿ ಸವಿದ ಭಕ್ತರು

KannadaprabhaNewsNetwork |  
Published : Jan 29, 2024, 01:31 AM IST
28ಕೆ್‍ಪಿಎಲ್4:ಕೊಪ್ಪಳ ಗವಿಮಠ ದಾಸೋಹದಲ್ಲಿ ಪ್ರಸಾದಕ್ಕೆ ಮಿರ್ಚಿ ತಯಾರಿ ಮಾಡಲಾಗಿತ್ತು. | Kannada Prabha

ಸಾರಾಂಶ

ಗವಿಸಿದ್ದೇಶ್ವರ ಜಾತ್ರೆ ಅಂದರೆ ವಿಶಿಷ್ಟತೆಗೆ ಹೆಸರು. ಅದರಲ್ಲೂ ಮಹಾದಾಸೋಹ ಅತ್ಯಂತ ಜೋರಾಗಿರುತ್ತದೆ. ಈ ಮಧ್ಯೆ ಲಕ್ಷ ಲಕ್ಷ ಭಕ್ತರಿಗೆ ಮಿರ್ಚಿ ತಯಾರಿಸಿ ಉಣಬಡಿಸಲಾಗಿದೆ. ಸುಮಾರು 5 ಲಕ್ಷ ಮಿರ್ಚಿ ಮಾಡಲಾಗಿತ್ತು. ದೇಶದ ಜಾತ್ರಾ ಪರಂಪರೆಯಲ್ಲೇ ಇದೊಂದು ವಿಶಿಷ್ಟ ದಾಖಲೆಯಾಗಿದೆ.

ಕೊಪ್ಪಳ: ಮಹಾರಥೋತ್ಸವದ ಮರುದಿನ ಗವಿಸಿದ್ದೇಶ್ವರ ಜಾತ್ರೆಯ ಮಹಾಪ್ರಸಾದಲ್ಲಿ ಭಕ್ತರು ಮಿರ್ಚಿ ಸವಿದರು.

ಗವಿಸಿದ್ದೇಶ್ವರ ಜಾತ್ರೆ ಅಂದರೆ ವಿಶಿಷ್ಟತೆಗೆ ಹೆಸರು. ಅದರಲ್ಲೂ ಮಹಾದಾಸೋಹ ಅತ್ಯಂತ ಜೋರಾಗಿರುತ್ತದೆ. ಈ ಮಧ್ಯೆ ಲಕ್ಷ ಲಕ್ಷ ಭಕ್ತರಿಗೆ ಮಿರ್ಚಿ ತಯಾರಿಸಿ ಉಣಬಡಿಸಲಾಗಿದೆ. ಸುಮಾರು 5 ಲಕ್ಷ ಮಿರ್ಚಿ ಮಾಡಲಾಗಿತ್ತು. ದೇಶದ ಜಾತ್ರಾ ಪರಂಪರೆಯಲ್ಲೇ ಇದೊಂದು ವಿಶಿಷ್ಟ ದಾಖಲೆಯಾಗಿದೆ.

20 ಕ್ವಿಂಟಲ್ ಹಸಿಮೆಣಸಿನ ಕಾಯಿ, 25 ಕ್ವಿಂಟಲ್ ಹಸಿ ಹಿಟ್ಟು ಬಳಸಿ ಮಿರ್ಚಿ ಮಾಡಲಾಗಿತ್ತು. ಮಿರ್ಚಿ ತಯಾರಿಸಲೆಂದೇ ಗವಿಸಿದ್ದೇಶ್ವರ ಮಿರ್ಚಿ ಬಳಗ ಮಿರ್ಚಿ ಮಾಡಿದೆ.

ಮಿರ್ಚಿ ಸವಿದ ಭಕ್ತರು: ಜಾತ್ರೆಯ ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿದ ಭಕ್ತರು ಪ್ರಸಾದದ ಜೊತೆಗೆ ಮಿರ್ಚಿ ಸವಿದರು. ಭಾನುವಾರ ತಡರಾತ್ರಿಯವರೆಗೂ ಮಿರ್ಚಿ ಹಾಕಲಾಗಿದ್ದು, ಭಕ್ತರು ರಾತ್ರಿಯೂ ಪ್ರಸಾದದಲ್ಲಿ ಮಿರ್ಚಿ ಸವಿದಿದ್ದಾರೆ.

ಮಿರ್ಚಿ ಹಾಕಿದ ಗವಿಶ್ರೀ, ಎಸ್ಪಿ: ದಾಸೋಹಕ್ಕೆ ಮಿರ್ಚಿ ಮಾಡುವ ವೇಳೆ ತೆರಳಿ ಗವಿಸಿದ್ದೇಶ್ವರ ಶ್ರೀಗಳು ಮಿರ್ಚಿ ಹಾಕಿದ್ದಾರೆ. ಕೊಪ್ಪಳ ಎಸ್ಪಿ ಯಶೋದಾ ವಂಟಿಗೋಡಿ ಮಿರ್ಚಿ ಹಾಕಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ