ಧಗ್ರಾಯೋ ಮೇಲೆ ದುರುದ್ದೇಶದ ಆರೋಪ

KannadaprabhaNewsNetwork |  
Published : Sep 30, 2024, 01:23 AM IST
ಧರ್ಮಸ್ಥಳ ಸಂಸ್ಥೆ ಸೇವಾ ಪ್ರತಿನಿಧಿಗಳ ಸಭೆ ಉದ್ಘಾಟನೆ | Kannada Prabha

ಸಾರಾಂಶ

ಕುಣಿಗಲ್ : ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಸಾಲ ನೀಡುವುದಿಲ್ಲ ಕೇವಲ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದೆ ಎoದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಸ್ವಷ್ಟಪಡಿಸಿದರು.

ಕುಣಿಗಲ್ : ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಸಾಲ ನೀಡುವುದಿಲ್ಲ ಕೇವಲ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದೆ ಎoದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಸ್ವಷ್ಟಪಡಿಸಿದರು. ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದರು.

ಯೋಜನೆಯಲ್ಲಿ ಸಹಾಯ ಸಂಘಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಜೊತೆಗೆ ಮಹಿಳೆಯರಿಗೆ ಆರ್ಥಿಕ ಗುಣಮಟ್ಟ ಹೆಚ್ಚಿಸುವ ಮೂಲಕ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಆದರೆ ಕೆಲವರು ದುರುದ್ದೇಶದಿಂದ ಯೋಜನೆ ಮೇಲೆ ಆರೋಪ ಮಾಡಿದ್ದು ಅದಕ್ಕೆ ಜನರು ಮನ್ನಣೆ ನೀಡಬಾರದು ಎಂದರು.

ಈ ವೇಳೆ ಕೆ. ಚಿನ್ನ ಒಕ್ಕೂಟದ ಸದಸ್ಯರಿಗೆ ಬ್ಯಾಂಕಿಗ್ ಸಂಬಂಧ ಮಾಹಿತಿ ನೀಡಿದರು. ಧಗ್ರಾಯೋದ ಸತೀಶ್ ಶೇಟ್, ಹುಲಿಯೂರುದುರ್ಗ ನಟರಾಜ್,ಅಮೃತೂರು ವರ ಲಕ್ಷ್ಮಿ, ಮರೂರು ನಿರ್ಮಲ, ಸಂದೇಶ್, ಸಂಪತ್, ಸುರೇoದ್ರ , ವಸಂತ್, ನವೀನ್, ಸತೀಶ್, ಮಮತ, ಪ್ರಕಾಶ್ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ