ರೇಣುಕಾಚಾರ್ಯ ಕಾರ್ತಿಕ ದೀಪೋತ್ಸವ
ಭಾರತೀಯ ಪರಂಪರೆಗೆ ಹಿಂದೂ ಧರ್ಮವೇ ತಳಹದಿ. ಹಿಂದೂ ಧರ್ಮದಿಂದ ಟಿಸಿಲೊಡೆದು ಅನೇಕ ಮತ, ಧರ್ಮಗಳು ಇಲ್ಲಿಯೇ ಬೆಳಕು ಕಂಡಿವೆ. ಹೊರಗಿನಿಂದ ಬಂದ ಧರ್ಮಗಳೂ ಇಲ್ಲಿ ಅಸ್ತಿತ್ವ ಪಡೆದುಕೊಂಡಿದೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ರೇಣುಕ ಪರಂಪರೆ ಮೌಲ್ಯವೂ ಸಾಕಾರಗೊಂಡಿದೆ ಎಂದರು.ಮಠದ ಭಕ್ತ ದೇವಾನಂದ್ ಮಾತನಾಡಿ, ಅಜ್ಞಾನದ ಕತ್ತಲೆ ಹೋಗಲಾಡಿಸಿ ಜ್ಞಾನದ ಬೆಳಕು ಹಚ್ಚುವುದು ಗುರುವಿಗೆ ಸುಲಭ ಸಾಧ್ಯ. ದೀಪೋತ್ಸವಕ್ಕೆ ಇಂಬು ನೀಡುವ ಕಾರ್ತಿಕ ಮಾಸ ನಮ್ಮೊಳಗಿನ ಅಜ್ಞಾನದ ಕತ್ತಲೆ ನೀಗಿಸಿ ಜ್ಞಾನ ಮಾರ್ಗದ ಬದುಕನ್ನು ಕಟ್ಟಿಕೊಳ್ಳಲು ಪ್ರೇರಕ. ದೀಪೋತ್ಸವ ನಮ್ಮೆಲ್ಲರನ್ನೂ ಒಟ್ಟಾಗಿ ಸೇರಿಸುವ ಜೊತೆ ಗುರುಗಳ ಸ್ಮರಣೆ ಮೂಲಕ ಸನ್ಮಾರ್ಗದ ಹಾದಿಯಲ್ಲಿ ಸಾಗಲು ಪ್ರೇರಕ ಎಂದರು.ಸಾಹಿತಿ ಜಗನ್ನಾಥ್, ಗಂಜಿಕಟ್ಟೆ ಕೃಷ್ಣಮೂರ್ತಿ ಅವರಿಂದ ಹಾಸ್ಯ ಕಾರ್ಯಕ್ರಮ ಹಾಗೂ ಜಾನಪದ, ತತ್ವಪದಗಳ ಗಾಯನ ನಡೆಯಿತು. ಅಂಬರದೇವರಹಳ್ಳಿ ಮಠದ ಉಜ್ಜನೀಶ್ವರ ಶಿವಾಚಾರ್ಯರು, ಜಗದ್ಗುರು ರೇಣುಕಾಚಾರ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಾಕೇಶ್, ಶಿವಾನಂದಾಶ್ರಮ ಟ್ರಸ್ಟ್ ಅಧ್ಯಕ್ಷ ಮರುಳಸಿದ್ದಾರಾಧ್ಯ, ಮಾಳಿಗೆ ಉಮಾಶಂಕರ್, ನಟರಾಜ್, ಸಂಪತ್ಕುಮಾರ್, ನಾಗೇಂದ್ರ ಪ್ರಸಾದ್, ಮಠದ ಭಕ್ತರು, ಟ್ರಸ್ಟ್ ಸದಸ್ಯರು ಇದ್ದರು.11 ಬೀರೂರು 2ಬೀರೂರು ರಂಭಾಪುರಿ ಖಾಸಾ ಶಾಖಾಮಠದಲ್ಲಿ ನಡೆದ ಶ್ರೀಜಗದ್ಗುರು ರೇಣುಕಾಚಾರ್ಯ ಕಾರ್ತಿಕ ದೀಪೋತ್ಸವವನ್ನು ಖಾಸಾಪೀಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.