ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಪುನರ್ವಸತಿ ಯೋಜನೆಗಳಡಿ 6822 ಎಂಆರ್ಡಬ್ಲ್ಯು, ವಿಆರ್ಡಬ್ಲ್ಯು ಹಾಗೂ ಯುಆರ್ ಡಬ್ಲ್ಯುಹುದ್ದೆಗಳಿದ್ದು, ಆ ಪೈಕಿ 6422 ನೌಕರರು ದುಡಿಯುತ್ತಿದ್ದಾರೆ. ವಿಕಲಚೇತನ, ಹಿರಿಯ ನಾಗರಿಕರಿಗೆ ಸರ್ಕಾರದ ಸೌಲಭ್ಯ ಒದಗಿಸುವುದು ಸೇರಿ 17 ವರ್ಷದಿಂದ ಇವರು ವಿವಿಧ 38 ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ, ಅತೀ ಕಡಿಮೆ ಗೌರವಧನ, ಉದ್ಯೋಗ ಕಾಯಮಾತಿ ಇಲ್ಲದೆ ಸಮಸ್ಯೆಯಾಗಿದೆ. ಸರ್ಕಾರ ಒನ್ ಟೈಂ ಸೆಟಲ್ಮೆಂಟ್ಮೂಲಕ ಇವರ ಸೇವೆಯವನ್ನು ಕಾಯಂ ಮಾಡಬೇಕು. ಅಲ್ಲಿವರೆಗೆ ಜೀವನೋಪಾಯಕ್ಕಾಗಿ ಕನಿಷ್ಠ ವೇತನ ಪದ್ಧತಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಪಂ, ತಾಪಂ.ಗಳಲ್ಲಿರುವ ವಿಕಲಚೇತನ ನೌಕರರು ಕನಿಷ್ಠ ಸೇವಾ ಭದ್ರತೆ, ಆರೋಗ್ಯ ವಿಮೆ ಸೇರಿ ಇತರೆ ಸೌಲಭ್ಯದಿಂದ ಒದಗಿಸಲು ಕ್ರಮ ಕೈಗೊಳ್ಳಬೇಕು. ಅಂಗವಿಕಲ ಅಭಿವೃದ್ಧಿ ನಿಗಮ ಸ್ಥಾಪಿಸಿ ಅನುದಾನ ಮೀಸಲಿಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುತ್ತಿರುವಂತೆ ನಿವೃತ್ತಿ ಉಪಧನ, ಇಎಸ್ಐ, ಇಪಿಎಫ್ ಸೇರಿ ಇತರೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಸುಬ್ರಹ್ಮಣಂ, ಕಾರ್ಯದರ್ಶಿ ಎಸ್.ಕೃಷ್ಣಪ್ಪ ಸೇರಿದಂತೆ ನೂರಾರು ವಿಕಲಚೇತರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿರುವ ಎಂಆರ್ಡಬ್ಲೂ, ವಿಆರ್ಡಬ್ಲೂ, ಯುಆರ್ಡಬ್ಲೂ ನೌಕರರು.