ಕನ್ನಡಪ್ರಭ ವಾರ್ತೆ ಮಂಡ್ಯ
ನೆರೆದಿದ್ದ ಗಣ್ಯರು ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್, ಸಮವಸ್ತ್ರ, ಶೂ, ಬ್ಯಾಗ್ ಹಾಗೂ ಇನ್ನಿತರ ಕಲಿಕಾ ಸಾಮಗ್ರಿಗಳನ್ನೂ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುವರ್ಣ ಕರ್ನಾಟಕ ಕೇರಳ ಸಮಾಜಂ ಮಂಡ್ಯ ವಲಯದ ಕಾರ್ಯದರ್ಶಿ ಮೇರಿ ಜೆನೆಟ್ ಮಾತನಾಡಿ, ಈ ಬಾರಿ ೩೧ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ನೀಡಿದ್ದೇವೆ. ನಮ್ಮ ಸಮಾಜವು ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಇನ್ನು ಹೆಚ್ಚು ಸೇವೆ ಮಾಡುವ ಗುರಿ ಹೊಂದಿದ್ದೇವೆ ಎಂದರು.ಮಂಡ್ಯ ವಲಯದ ಉಪಾಧ್ಯಕ್ಷ ಟಿ.ಜೆ.ಆಂಟೋನಿ, ಖಜಾಂಜಿ ಐ.ಪಿ.ರಾಮದಾಸ್, ಬೋರ್ಡ್ಮೆಂಬರ್ ಎ.ವಿಲಿಯಂ, ಸಂಚಾಲಕಿ ಪುಷ್ಪಜಾ, ಸದಸ್ಯರಾದ ಟಿ.ಎಂ.ಸಿಬಿಚ್ಚನ್, ವಿ.ಕೆ.ಮನಿಕಂದನ್, ಶಿವು ಹಾಜರಿದ್ದರು.
ಹಲಗೂರು: ಹಲಸಹಳ್ಳಿ ಗವಿಮಠದಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆದವು.
ನಂತರ ಸ್ವಾಮೀಜಿ ಮಾತನಾಡಿ, ಈ ಸ್ಥಳ ಪುಣ್ಯಕ್ಷೇತ್ರವಾಗಿದೆ. ರಾಜ್ಯದಲ್ಲೇ ಅಪಾರ ಭಕ್ತಾರನ್ನು ಒಳಗೊಂಡಿದೆ. ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಸಿ ಬಂದ ಭಕ್ತರಿಗೆ ಪ್ರಸಾದ ನೀಡುತ್ತೇವೆ. ವಿವಿಧ ಜಿಲ್ಲೆಗಳಿಂದ ಅಮಾವಾಸ್ಯೆ ದಿನ ಸುಮಾರು 90ಕ್ಕೂ ಹೆಚ್ಚು ಭಕ್ತರು ಬರುತ್ತಾರೆ ಎಂದರು.
ಪಟ್ಟಣ ಪ್ರದೇಶಗಳಲ್ಲಿ ಹೋಗಿ ಕಲ್ಯಾಣ ಮಂಟಪದಲ್ಲಿ ಹೆಚ್ಚು ಹಣ ವೆಚ್ಚ ಮಾಡುವುದಕ್ಕಿಂತ ಇಂತಹ ಪುಣ್ಯಕ್ಷೇತ್ರಗಳಲ್ಲಿ ಮದುವೆ ಆಗುವುದರಿಂದ ವಧು-ವರರಿಗೆ ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ವೃದ್ಧಿ ಆಗಲಿದೆ ಎಂದರು.