ಯಲ್ಲಾಪುರ: ಪತ್ರಿಕೆಗಳ ಬೆಳವಣಿಗೆಗೆ ವಿತರಕರ ಕೊಡುಗೆ ಅಪಾರ. ಬಿಸಿಲು, ಚಳಿ ಹಾಗೂ ಮಳೆಯೆನ್ನದೇ ಸೂರ್ಯ ಹುಟ್ಟುವ ಮುಂಚೆಯೇ ಎದ್ದು ಮನೆ ಮನೆಗೆ ಸುದ್ದಿ ತಲುಪಿಸುವ ಕಷ್ಟದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾರೆ. ಅವರ ಕಾಯಕವನ್ನು ಪ್ರೋತ್ಸಾಹಿಸಲು ಅಳಿಲು ಸೇವೆಯನ್ನು ಮಾಡಿದ್ದೇನೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ ತಿಳಿಸಿದರು.
ಪತ್ರಿಕಾ ವಿತರಕರ ಒಕ್ಕೂಟದ ವಿತರಕ ಜಯರಾಜ ಗೋವಿ ಹಾಗೂ ಅನಿಲ ಭಟ್ ಮಾತನಾಡಿ, ನಮ್ಮ ಕಾಯಕವನ್ನು ಶ್ರದ್ಧೆಯಿಂದ ಮುಂದುವರಿಸಿಕೊಂಡು ಹೋಗಲು ತಮ್ಮಂತಹ ಸಹೃದಯದವರ ಬೆಂಬಲದಿಂದ ಸಾಧ್ಯವಾಗುತ್ತಿದೆ. ಮಳೆಗಾಲದಲ್ಲಿ ಉತ್ತಮ ಗುಣಮಟ್ಟದ ರೇನ್ ಕೋಟ್ ನೀಡಿ ಗೌರವಿಸಿದ್ದಕ್ಕೆ ನಿಮಗೆ ಚಿರಋಣಿಯಾಗಿದ್ದೇವೆ ಎಂದರು.
ಪ್ರಭಾವತಿ ನಿರ್ವಹಿಸಿದರು. ವಿತರಕರಾದ ಅಮೃತ ಹೆಂದ್ರೆ, ರಾಜು ಉಡುಪಿಕರ, ದೀಪಕ ಕಲಾಲ, ರಾಕೇಶ, ಅಭಿ, ಪ್ರಶಾಂತ ಗೋಖಲೆ ಇದ್ದರು.