ಗ್ರಾಮದಲ್ಲಿ ಆಧಾರ್‌ ನೋಂದಣೆಗಾಗಿ ತಾಲೂಕು ಆಡಳಿತ ಮನವಿಗೆ ಜಿಲ್ಲಾಡಳಿತ ಸ್ಪಂದನೆ

KannadaprabhaNewsNetwork |  
Published : Aug 13, 2025, 12:30 AM IST
ಶುಲ್ವಾಡಿ ಗ್ರಾಮದ ಸಂಗನಮೇರಿ ಅವರಿಗೆ ಗ್ರಾಮದಲ್ಲಿಯೇ ಆಧಾರ್ ನೋಂದಣಿ ಮಾಡಲು ಜಿಲ್ಲಾಡಳಿತ ಆಧಾರ್ ಕಿಟ್ ಸಮೇತ ಗ್ರಾಮಕ್ಕೆ ಭೇಟಿ ನೀಡಿ ಆಧಾರ್ ನೋಂದಣಿ ಮಾಡುವ | Kannada Prabha

ಸಾರಾಂಶ

ತಾಲೂಕು ಆಡಳಿತದ ಮನವಿ ಮೇರೆಗೆ ವೃದ್ಧೆ ಹಾಗೂ ವಿಕಲಚೇತನ ಆಧಾರ್ ನೋಂದಣಿಗೆ ಜಿಲ್ಲಾಡಳಿತವು ಗ್ರಾಮದಲ್ಲಿಯೇ ನೋಂದಣಿ ಮಾಡಲು ಕ್ರಮ ವಹಿಸಿದೆ. ತಾಲೂಕಿನ ರಾಮಪುರ ಹೋಬಳಿಯ ಹಳೆ ಮಾರ್ಟಳ್ಳಿ ಗ್ರಾಮದ ವಿಕಲಚೇತನ ಬಸವರಾಜ್ ಹಾಗೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಸುಳ್ವಾಡಿ ಗ್ರಾಮದ ವೃದ್ಧೆ ಸಂದನಮೇರಿ ಅವರ ಮನೆಗೆ ಭೇಟಿ ನೀಡಿ ಹೊಸ ಆಧಾರ್ ಕಾರ್ಡ್ ನೋಂದಣಿ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕು ಆಡಳಿತದ ಮನವಿ ಮೇರೆಗೆ ವೃದ್ಧೆ ಹಾಗೂ ವಿಕಲಚೇತನ ಆಧಾರ್ ನೋಂದಣಿಗೆ ಜಿಲ್ಲಾಡಳಿತವು ಗ್ರಾಮದಲ್ಲಿಯೇ ನೋಂದಣಿ ಮಾಡಲು ಕ್ರಮ ವಹಿಸಿದೆ. ತಾಲೂಕಿನ ರಾಮಪುರ ಹೋಬಳಿಯ ಹಳೆ ಮಾರ್ಟಳ್ಳಿ ಗ್ರಾಮದ ವಿಕಲಚೇತನ ಬಸವರಾಜ್ ಹಾಗೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಸುಳ್ವಾಡಿ ಗ್ರಾಮದ ವೃದ್ಧೆ ಸಂದನಮೇರಿ ಅವರ ಮನೆಗೆ ಭೇಟಿ ನೀಡಿ ಹೊಸ ಆಧಾರ್ ಕಾರ್ಡ್ ನೋಂದಣಿ ಮಾಡಲಾಯಿತು.

ವಿಕಲಚೇತನ ಬಸವರಾಜ್ ಹಾಗೂ ಸ್ಪಂದನ ಮೇರಿ ಅವರಿಗೆ ಆರೋಗ್ಯ ಸೇವೆ ಮತ್ತು ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಇಲ್ಲದಿರುವ ಬಗ್ಗೆ ಗ್ರಾಮಲೆಕ್ಕಿಗ ಸುರೇಶ್ ತಹಸೀಲ್ದಾರ್‌ ಚೈತ್ರಾಗೆ ಗ್ರಾಮದಲ್ಲಿಯೇ ಆಧಾರ್ ನೋಂದಣಿ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಲೇ ಸ್ಪಂದಿಸಿ ಬಸವರಾಜ್, ಸಂಗನಮೇರಿಗೆ ಗ್ರಾಮದಲ್ಲಿಯೇ ಆಧಾರ್ ನೋಂದಣಿ ಮಾಡಲು ಆಧಾರ್ ಕಿಟ್ ಸಮೇತ ಗ್ರಾಮಕ್ಕೆ ಭೇಟಿ ನೀಡಿ ಆಧಾರ್ ನೋಂದಣಿ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆಧಾರ್ ನೋಂದಣೆಗೆ ತೊಂದರೆ ಅನುಭವಿಸುತ್ತಿರುವ ಅನಾರೋಗ್ಯದಿಂದ ಬಳಲುತ್ತಿರುವವರು, ವಿಕಲಚೇತನರು ಮಾಹಿತಿ ತಾಲೂಕು ಆಡಳಿತಕ್ಕೆ ತಿಳಿಸಿದರೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೆ ಕೂಡಲೇ ಗ್ರಾಮಗಳಲ್ಲಿಯೇ ಭೇಟಿ ನೀಡಿ ಆಧಾರ್ ನೋಂದಣಿ ಹಮ್ಮಿಕೊಳ್ಳಲಾಗುವುದು. ನಾಗರಿಕರು ಸದ್ಬಳಕೆ ಮಾಡಿಕೊಳ್ಳಿ ಎಂದು ಜಿಲ್ಲಾ ಆಧಾರ್ ನೋಂದಣಿ ಆಪರೇಟರ್ ನೇತ್ರಾವತಿ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ