ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ನೀಡಲಾಗುವ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಪ್ರಾಥಮಿಕ ವಿಭಾಗದಿಂದ 12 ಹಾಗೂ ಪ್ರೌಢಶಾಲಾ ವಿಭಾಗದಿಂದ 6 ಒಟ್ಟು 18 ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ.
- ಪ್ರಾಥಮಿಕ ವಿಭಾಗದಿಂದ 12, ಗೂ ಪ್ರೌಢಶಾಲಾ ವಿಭಾಗದಿಂದ 6 ಶಿಕ್ಷಕರಿಗೆ ಪ್ರಶಸ್ತಿ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ನೀಡಲಾಗುವ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಪ್ರಾಥಮಿಕ ವಿಭಾಗದಿಂದ 12 ಹಾಗೂ ಪ್ರೌಢಶಾಲಾ ವಿಭಾಗದಿಂದ 6 ಒಟ್ಟು 18 ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ.
ಆಯ್ಕೆಯಾದ ಶಿಕ್ಷಕರ ವಿವರ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಆಯ್ಕೆಯಾದ ಶಿಕ್ಷಕರುಗಳ ವಿವರ:
ಚನ್ನಗಿರಿ ತಾ. ದೋಣಿಹಳ್ಳಿ ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಚ್.ಎಂ.ಸುರೇಶ, ದಾವಣಗೆರೆ ಉತ್ತರ ವಲಯದ ಶ್ರೀರಂಗನಮಟ್ಟಿ ಎನ್.ಕೆ.ಉಮಾಪತಿ ಸ.ಶಿ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದಾವಣಗೆರೆ ದ.ವ. ಹಳೇ ಕೊಳೇನಹಳ್ಳಿಯ ಸ.ಶಿ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಿ.ಕೆ.ರವೀಂದ್ರ, ಹರಿಹರ ತಾ. ಭಾನುವಳ್ಳಿ ಗ್ರಾಮದ ಸ.ಶಿ. ಕರ್ನಾಟಕ ಪಬ್ಲಿಕ್ ಶಾಲೆಯ ಸಿ.ನಾಗರಾಜ, ಹೊನ್ನಾಳಿ ತಾ. ಚನ್ನಮಂಬಾಪುರದ ಸ.ಶಿ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಿನ್ನಾನಾಯ್ಕ್, ಜಗಳೂರು ತಾ. ಜಾಡನಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೆ.ಬಿ.ಜ್ಯೋತಿ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಆಯ್ಕೆಯಾದ ಶಿಕ್ಷಕರ ವಿವರ: ಚನ್ನಗಿರಿ ತಾ. ಅಗರಬನ್ನಿಹಟ್ಟಿ ಸ.ಶಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಂತಾಜ್ ಬಾನು, ದಾವಣಗೆರೆ ಉ.ವ. ಬಸಾಪುರ ಸ.ಶಿ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೆ.ಎಂ.ನಿಂಗಮ್ಮ, ದಾವಣಗೆರೆ ದ.ವ. ತರಳುಬಾಳು ನಗರ ಬ.ಮು.ಶಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿ.ಕೆ ಹನುಮಂತಪ್ಪ, ಹರಿಹರ ತಾ. ಮಲೆಬೆನ್ನೂರು ಸ.ಶಿ ಶ್ರೀ ಭೀರಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕಾಯಕದ ಭೀಮಪ್ಪ, ಹೊನ್ನಾಳಿ ತಾ. ಸುರಹೊನ್ನೆಯ ಸ.ಶಿ.ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಿ.ಕೆ.ಜ್ಯೋತಿ, ಜಗಳೂರು ತಾ. ಗಿಡ್ಡನಕಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಬಿ.ಅನಿತಾ,
ಪ್ರೌಢಶಾಲಾ ವಿಭಾದಿಂದ ಆಯ್ಕೆಯಾದ ಶಿಕ್ಷಕರ ವಿವರ: ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಕೆ.ಪಿ.ಎಸ್ (ಪ್ರೌಢಶಾಲಾ ವಿಭಾಗ)ಜಿ.ಡಿ. ದ್ಯಾಮೇಶ್ ಕುಮಾರ, ಗಣಿತ ಶಿಕ್ಷಕರು, ದಾವಣಗೆರೆ ಉ.ವ. ಹುಲಿಕಟ್ಟಿಯ ಸ.ಶಿ ಸರ್ಕಾರಿ ಪ್ರೌಢಶಾಲೆ, ನಿರ್ಮಲಾ ತಂಬ್ರಹಳ್ಳಿ, ದಾವಣಗೆರೆ ದ.ವ. ಸ.ಶಿ. ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಪ್ರೌಢಶಾಲೆಯ ಸಿ.ಎಂ.ಸುರೇಶ, ಹರಿಹರ ತಾ. ಮಲೆಬೆನ್ನೂರು, ಸ.ಶಿ ಸರ್ಕಾರಿ ಉರ್ದು ಪ್ರೌಢಶಾಲೆಯ ಸೈಯದಾ ಕೌಸರ್ ತಸ್ನಿಮ್, ಹೊನ್ನಾಳಿ ತಾ. ಸಾಸ್ವೆಹಳ್ಳಿಯ ಸ.ಶಿ ಕೆ.ಪಿ.ಎಸ್ ಎಂ.ಎಚ್.ಸಂತೋಷ, ಜಗಳೂರು ತಾ. ದೊಡ್ಡಬೊಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಪಿ.ಟಿ.ಕುಮಾರಸ್ವಾಮಿ ಇವರಿಗೆ ಅತ್ಯುತ್ತಮ ಶಿಕ್ಷಕ ಪುರಸ್ಕೃತರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.