- ತೀರ್ಪುಗಾರರ ನಿರ್ಧಾರವೇ ಅಂತಿಮ: ಆಯೋಜಕ ಶಂಕರ ಗಣೇಶ
- ಡಿಸಿಎಂ ಲೇಔಟ್ ಅನಿಲ್ ಕುಂಬ್ಳೆ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಮೆಂಟ್
- ನೀಲಮ್ಮ ತೋಟದ ಶ್ರೀ ಚಾಮುಂಡೇಶ್ವರಿ ಕ್ರೀಡಾ ಸಮಿತಿ ಸುವರ್ಣ ಮಹೋತ್ಸವ- - -
ಶ್ರೀ ಚಾಮುಂಡೇಶ್ವರಿ ಕ್ರೀಡಾ ಸಮಿತಿಯ ಸುವರ್ಣ ಮಹೋತ್ಸವ ಅಂಗವಾಗಿ ನೀಲಮ್ಮನ ತೋಟದ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಸಹಯೋಗದಲ್ಲಿ ನಗರದ ಡಿಸಿಎಂ ಲೇಔಟ್ನ ಅನಿಲ್ ಕುಂಬ್ಳೆ ಕ್ರೀಡಾಂಗಣದಲ್ಲಿ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಜಿಲ್ಲಾ ಚಾಂಪಿಯನ್ ಶಿಪ್-2025 ಮೇ 23ರಿಂದ 25ರವರೆಗೆ ನಡೆಯಲಿದೆ ಎಂದು ಪಂದ್ಯಾವಳಿ ಆಯೋಜಕ ಶಂಕರ ಗಣೇಶ ಹೇಳಿದರು.
ಪಂದ್ಯಾವಳಿಯಲ್ಲಿ ಜಿಲ್ಲಾ ಚಾಂಪಿಯನ್ ಆಗುವ ತಂಡಕ್ಕೆ ಆಕರ್ಷಕ ಟ್ರೋಫಿ, ತಂಡದ 10 ಆಟಗಾರರಿಗೆ ಏರ್ ಕೂಲರ್ಗಳು, ದ್ವಿತೀಯ ಸ್ಥಾನಕ್ಕೆ ತಂಡದ 10 ಸದಸ್ಯರಿಗೆ ಮಿಕ್ಸರ್ಗಳು, ತೃತೀಯ ಬಹುಮಾನ 10 ಆಟಗಾರರಿಗೆ ವಾಲ್ ಫ್ಯಾನ್ಗಳು, 4ನೇ ಬಹುಮಾನವಾಗಿ 10 ಸದಸ್ಯರಿಗೆ ಕುಕ್ಕರ್ಗಳನ್ನು ನೀಡಲಾಗುವುದು ಎಂದು ವಿವರಿಸಿದರು.
ಯಾವುದೇ ಆಟಗಾರರು ಅಥವಾ ತಂಡದಲ್ಲಿ ಸಮಸ್ಯೆಗಳಿದ್ದರೆ ಪಂದ್ಯಾವಳಿ ಸ್ಥಳದಲ್ಲಿ ಹೇಳತಕ್ಕದ್ದಲ್ಲ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳು ಸಮವಸ್ತ್ರದೊಂದಿಗೆ ಸಮಯಕ್ಕೆ ಸರಿಯಾಗಿ ಭಾಗವಹಿಸಬೇಕು. ಪಂದ್ಯಾವಳಿಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ. ಪಂದ್ಯಗಳು ನಡೆಯುವಾಗ ಆಟಗಾರರಿಗೆ ಅಥವಾ ತಂಡದವರಿಗೆ ಏನಾದರೂ ತೊಂದರೆಯಾದರೆ ಅದಕ್ಕೆ ವ್ಯವಸ್ಥಾಪಕರು, ಸಂಘಟಕರು ಕಾರಣರಲ್ಲ. ಆಯಾ ತಂಡದವರೇ ಸಮಸ್ಯೆಗಳಿಗೆ ಸಂಪೂರ್ಣ ಹೊಣೆಗಾರರು, ಜವಾಬ್ದಾರರು ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಬಾಲರಾಜ, ನಾಗರಾಜ, ಕೃಷ್ಣಮೂರ್ತಿ, ರವಿಕುಮಾರ ಇತರರು ಇದ್ದರು.
-21ಕೆಡಿವಿಜಿ1, 2.ಜೆಪಿಜಿ: