ಡಿವೈಡರ್ ಕಳಪೆ: ಗಂಗಾವತಿ ನಗರಸಭೆಯಿಂದ ತೆರವು

KannadaprabhaNewsNetwork |  
Published : Sep 20, 2025, 01:01 AM IST
19ುಲು1,2 | Kannada Prabha

ಸಾರಾಂಶ

ಗಂಗಾವತಿಯ ನೀಲಕಂಠೇಶ್ವರ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದವರೆಗೂ ನಿರ್ಮಿಸಿದ್ದ ಡಿವೈಡರ್ ಕಳಪೆ ಮಟ್ಟದ್ದಾಗಿದೆ ಎಂದು ನಗರದ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಗಂಗಾವತಿ:

ನಗರದ ನೀಲಕಂಠೇಶ್ವರ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದವರಿಗೂ ನಿರ್ಮಿಸಿದ್ದ ಡಿವೈಡರ್ ಕಳಪೆ ಮಟ್ಟದ್ದಾಗಿದ್ದರಿಂದ ನಗರಸಭೆಯ ಜೆಸಿಬಿ ಯಂತ್ರಗಳಿಂದ ತೆರವು ಮಾಡಲಾಯಿತು.

ಹುಬ್ಬಳ್ಳಿಯ ಮೀಡಿಯಾ ಜೆನಿಸಿಸ್ ಕಂಪನಿ ನಗರಸಭೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ನಗರದ 9 ಸ್ಥಳಗಳಲ್ಲಿ ಬೃಹತ್ ಪ್ರಮಾಣದಲ್ಲಿ ನಾಮಫಲಕ (ಹೋಲ್ಡಿಂಗ್ಸ್‌) ಅಳವಡಿಸಿದ್ದರು. ಆಗ ಅವರೇ ನೀಲಕಂಠೇಶ್ವರ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದ ವರೆಗೂ ಡಿವೈಡರ್ ನಿರ್ಮಿಸಿದ್ದರು. ಅದು ಕಳಪೆ ಎಂಬ ಕಾರಣಕ್ಕೆ ಈಗ ತೆರವುಗೊಳಿಸಲಾಗಿದೆ.

ಲೋಕಾಯುಕ್ತಕ್ಕೆ ದೂರು:

ನಗರದ ನೀಲಕಂಠೇಶ್ವರ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದವರೆಗೂ ನಿರ್ಮಿಸಿದ್ದ ಡಿವೈಡರ್ ಕಳಪೆ ಮಟ್ಟದ್ದಾಗಿದೆ ಎಂದು ನಗರದ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿ ಕೂಡಲೆ ಕಳಪೆ ಮಟ್ಟದ ಡಿವೈಡರ್‌ ತೆರವುಗೊಳಿಸಬೇಕು ಎಂದು ಸೂಚಿಸಿದ್ದ ಹಿನ್ನೆಲೆಯಲ್ಲಿ ತೆರವು ಮಾಡಲಾಗಿದೆ.

ಹಳೆಯ ಡಿವೈಡರ್ ಮೇಲೆ ಮೇಕಪ್:

ಈ ಹಿಂದೆ ನಿರ್ಮಿಸಿದ್ದ ಡಿವೈಡರ್ ಮೇಲೆ ಮೇಕಪ್ ಮಾಡಿ ಹೊಸದು ಎಂದು ಬಿಂಬಿಸಿದ್ದಾರೆ ಎಂದು ದೂರದಾರ ಹೇಳಿದ್ದರು. ಈಗಾಗಲೇ ನಗರದಲ್ಲಿ ಕಂಪನಿ ಅವೈಜ್ಞಾನಿಕವಾಗಿ ನಾಮಫಲಕ (ಹೋಲ್ಡಿಂಗ್ಸ್‌) ಹಾಕಿದ್ದಾರೆಂಬ ಕಾರಣಕ್ಕೆ ಮೂರಕ್ಕೂ ಹೆಚ್ಚು ನಾಮಫಲಕ ಕಿತ್ತೆಸೆಯಲಾಗಿದೆ. ಈಗ ಡಿವೈಡರ್‌ ಕೂಡ ಕಳಪೆ ಮಟ್ಟದ್ದು ಎಂದು ಆರೋಪಿಸಲಾಗಿದೆ. ಈಗ ನಗರದಲ್ಲಿ ಲೈಟಿಂಗ್ ಕಂಬ ಮತ್ತು ಡಿವೈಡರ್ ಅಳವಡಿಕೆ ಆಮೆಗತಿಯಲ್ಲಿ ಸಾಗಿದ್ದು, ಕಂಪನಿ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ನೀಲಕಂಠೇಶ್ವರ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದ ವರೆಗೂ ಹುಬ್ಬಳ್ಳಿಯ ಮೀಡಿಯಾ ಜೆನಿಸಿಸ್ ಕಂಪನಿ ಡಿವೈಡರ್ ನಿರ್ಮಿಸಿದೆ. ಅವರಿಗೆ ಯಾವುದೇ ಅನುದಾನ ನೀಡಿಲ್ಲ, ಉಚಿತವಾಗಿ ನಿರ್ಮಿಸಿಕೊಡಬೇಕು ಎಂದು ಹೇಳಿದ್ದರಿಂದ ನಿರ್ಮಿಸಿದ್ದಾರೆ. ಡಿವೈಡರ್ ಆಗಿದ್ದರಿಂದ ರಸ್ತೆಯ ಎಡ ಮತ್ತು ಬಲ ಬದಿಯಲ್ಲಿ ಸಂಚಾರಕ್ಕೆ ಸ್ವಲ್ಪಮಟ್ಟಿಗೆ ಅಡ್ಡಿ ಉಂಟಾಗಿತ್ತು. ಈ ಕಾರಣದಿಂದ ನಗರಸಭೆಯಿಂದಲೇ ತೆರವುಗೊಳಿಸಲಾಗಿದೆ.

ವಿರೂಪಾಕ್ಷಮೂರ್ತಿ ಪೌರಾಯುಕ್ತರು, ನಗರಸಭೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಬೀದಿ ನಾಯಿಗಳು ಶೀಘ್ರ ಶೆಲ್ಟರ್‌ಗೆ : ರಾವ್‌
ಸಿದ್ದು ಅಹಿಂದ ಲೀಡರ್‌ ಆಗಿದ್ದರೆ ಪುತ್ರ ಕ್ಷೇತ್ರ ಆಯ್ಕೆ ಏಕೆ?: ಗೌಡ