ರಾಮನಗರ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಹರಕೆ ಹೊತ್ತು ಕನಕಪುರದಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿರುವ ಮಹಾತ್ಮ ಗಾಂಧೀಜಿ ವೇಷ ತೊಟ್ಟ ಅಭಿಮಾನಿ ಶನಿವಾರ ರಾಮನಗರದ ಮೂಲಕ ಬೆಂಗಳೂರಿನತ್ತ ಸಾಗಿದರು.
ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಅಗಲೆಂದು ಹರಕೆ ಹೊತ್ತಿದ್ದ ಮುತ್ತುರಾಯಪ್ಪಗಾಂಧಿ ಮಹಾತ್ಮ ಗಾಂಧೀಜಿ ವೇಷ ತೊಟ್ಟು ಕನಕಪುರದ ಕೆಂಕೇರಮ್ಮ ದೇವಾಲಯದಿಂದ ಬೆಂಗಳೂರಿನ ತನಕ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದು, ಎರಡನೇ ದಿನವಾದ ಶನಿವಾರ ರಾಮನಗರದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಅವರನ್ನು ಸ್ವಾಗತಿಸಿ ಬೀಳ್ಕೊಟ್ಟರು.
ಈ ವೇಳೆ ಮಾತನಾಡಿದ ಮುತ್ತುರಾಯಪ್ಪ ಗಾಂಧಿ, ನಾನು ಡಿ.ಕೆ.ಶಿವಕುಮಾರ್ ಅವರ ಅಭಿಮಾನಿ, ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದರೆ ಅವರ ಮನೆದೇವತೆ ಕೆಂಕೇರಮ್ಮ ದೇವಾಲಯದಿಂದ ಬೆಂಗಳೂರಿನ ಸದಾಶಿವನಗರದ ಡಿಕೆಶಿ ಅವರ ಮನೆವರೆಗೆ ಗಾಂಧಿವೇಷ ತೊಟ್ಟು ಕಾಲ್ನಡಿಗೆ ಯಾತ್ರೆ ನಡೆಸುವುದಾಗಿ ದೇವರಲ್ಲಿ ಹರಕೆ ಕಟ್ಟುಕೊಂಡಿದ್ದಾಗಿ ಹೇಳಿದರು.ಒಂದು ವರ್ಷ ತಡವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಹರಕೆ ಹೊತ್ತಂತೆ ಶುಕ್ರವಾರ ಕೆಂಕೇರಮ್ಮ ದೇವಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಪ್ರಾರಂಭ ಮಾಡಿ ಎರಡನೇ ದಿನ ರಾಮನಗರಕ್ಕೆ ಆಗಮಿಸಿದ್ದೇನೆ. ಇಲ್ಲಿನ ಶಾಸಕರ ಮಾರ್ಗದರ್ಶನದಲ್ಲಿ ಯುವ ಕಾಂಗ್ರೆಸ್ ಮುಖಂಡರು ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದ್ದು ನನಗೆ ಸಂತಸ ತಂದಿದೆ ಎಂದರು.
ಈ ಹಿಂದೆ ಬಳ್ಳಾರಿಯಿಂದ ಬೆಂಗಳೂರು ತನಕ, ಮೇಕೆದಾಟಿನಿಂದ ಬೆಂಗಳೂರು ತನಕ ಹಾಗೂ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಗಾಂಧಿ ವೇಷದಲ್ಲಿ ಹೆಜ್ಜೆ ಹಾಕಿದ್ದೆ ಎಂದು ಮುತ್ತುರಾಯಪ್ಪಗಾಂಧಿ ತಿಳಿಸಿದರು.
6ಕೆಆರ್ ಎಂಎನ್ 3.ಜೆಪಿಜಿ
ಮುತ್ತುರಾಯಪ್ಪಗಾಂಧಿ ಅವರನ್ನು ಕಾಂಗ್ರೆಸ್ ಮುಖಂಡರು ಸ್ವಾಗತಿಸಿ ಬೀಳ್ಕೊಟ್ಟರು.