ಗದಗ: ರಾಜ್ಯದಲ್ಲಿ ರೈತರಿಗೆ ಗೊಬ್ಬರ ಸಿಗದೇ ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಹೊಸದೊಂದು ನಾಟಕ ಆರಂಭಿಸಿದೆ. ಮತಗಳ್ಳತನದ ವಿರುದ್ಧ ಹೋರಾಟದ ಹಿಂದೆ ಡಿಕೆ ಶಿವಕುಮಾರ್ ಅವರನ್ನು ಸಮಾಧಾನಪಡಿಸುವ ತಂತ್ರವಾಗಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ತಿಳಿಸಿದ್ದಾರೆ.
ಇದು ಡಿಕೆ ಶಿವಕುಮಾರ್ ಓಲೈಸುವ ನಾಟಕ ಆಗಿರದಿದ್ದರೆ 19 ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇಕೆ ಆಯ್ಕೆ ಮಾಡಿಕೊಂಡರು?
ಮತದಾರರ ಪಟ್ಟಿ ಪ್ರಕಟಗೊಂಡ ನಂತರ ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದರೂ ಯಾಕೆ ಆಕ್ಷೇಪಣೆ ಸಲ್ಲಿಸಲಿಲ್ಲ? ಚುನಾವಣೆ ಮುಗಿದು 14 ತಿಂಗಳ ನಂತರ ಏಕೆ ಈಗಹೋರಾಟ? ದೇಶದಲ್ಲಿ 543 ಕ್ಷೇತ್ರಗಳನ್ನು ಬಿಟ್ಟು ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಏಕೆ ಆಯ್ಕೆ ಮಾಡಿದ್ದು? ಎಂದು ಪ್ರಶ್ನಿಸಿದ್ದಾರೆ.ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಬಿಟ್ಟು ಇಂತಹ ಹೋರಾಟದ ನಾಟಕ ಮಾಡಬೇಡಿ ಎಂದು ಬಸವರಾಜ ಅಪ್ಪನವರ, ಸಿದ್ದಲಿಂಗಯ್ಯ ಹೊಂಬಾಳೆಮಠ, ಜಿ.ಕೆ. ಕೊಳ್ಳಿಮಠ, ಶರಣಪ್ಪ ಹೂಗಾರ, ರಮೇಶ್ ಹುಣಸಿಮರದ, ಸಂತೋಷ್ ಪಾಟೀಲ್, ಮಂಜುಳಾ ಮೇಟಿ, ಲಲಿತಾ ಕಲ್ಲಪ್ಪನವರ್, ರಾಜೇಶ್ವರಿ ಹೂಗಾರ, ಪ್ರಫುಲ್ ಪುಣೆಕರ್, ಅಭಿಷೇಕ ಅಂಬಳಿ, ಜಯರಾಜ್ ವಾಲಿ ಮುಂತಾದವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.